ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ವಿಟ್ಲ ವಲಯ ಸಮಿತಿ ಇದರ ವಾರ್ಷಿಕ ಮಹಾಸಭೆಯು ಮಾ.13 ರಂದು ಅದಿತ್ಯವಾರ ಬೆಳಿಗ್ಗೆ 11ಕ್ಕೆ ವಿಟ್ಲ ವಲಯದ ಅಧ್ಯಕ್ಷರಾದ ಶ್ರೀಮಾನ್ ಸೀತಾರಾಮ ಶೆಟ್ಟಿಯರವರ ಅಧ್ಯಕ್ಷತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಜರಗಿತು.
ಮುಖ್ಯ ಅಥಿತಿಗಳಾಗಿ ದ.ಕ.ಜಿಲ್ಲಾಧ್ಯಕ್ಷರಾದ ಜಯಂತ್ ಉರ್ಲಾಂಡಿ, ಜಿಲ್ಲಾ ಕೋಶಾಧಿಕಾರಿಯಾದ ಈಶ್ವರ್ ಕುಲಾಲ್, ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಎಮ್ , ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಯಾದೇಶ್ ತುಂಬೆ, ಕ್ಷೇತ್ರ ಸಮಿತಿಯ ಕೋಶಾಧಿಕಾರಿಯಾದ ತುಳಸಿ ಅರ್, ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ವಸಂತ ಮೂಲ್ಯ, ಜಿಲ್ಲಾ ಸಮಿತಿಯ ಸದಸ್ಯರಾದ ಗಂಗಯ್ಯ, ಉಪಸ್ಥಿತರಿದ್ದರು.
ನಮ್ಮ ಸಂಘಟನೆಯು ಗಟ್ಟಿಯಾಗಬೇಕಾದರೆ ನಾವು ಸಂಘಟಿತರಾಗುವುದು ಅಗತ್ಯ ಹಾಗೂ ಸ್ಮಾರ್ಟ್ ಕಾರ್ಡ್, ಮತ್ತು ಇ ಶ್ರಮ ಕಾರ್ಡಿನ, ಬಗ್ಗೆ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು
ಅಶಕ್ತರೀಗೆ ಎರಡು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ನಿಕಟಪೂರ್ವ ವಲಯಧ್ಯಕ್ಷರಾದ ದಿವಂಗತ ರುಕುಮ ಟೈಲರ್ ರವರ ಪರವಾಗಿ ಅವರ ಕುಟುಂಬದ ಸದಸ್ಯರನ್ನ ಫಲಪುಷ್ಪ ನೀಡಿ ಗೌರವಿಸಲಾಯಿತು.
ಶೀಮತಿ ಸುಮಿತ್ರಾ ವರದಿವಾಚಿಸಿದರು. ಶ್ರೀಮತಿ ಶಾಲಿನಿ ಲೆಕ್ಕ ಪತ್ರ ಮಂಡಿಸಿದರು. ಪ್ರಾರ್ಥನೆ ಮತ್ತು ಧನ್ಯವಾದ ಶ್ರೀಮತಿ ವಸಂತಿ ಅಮೈ ನೀಡಿದರು. ವಸಂತ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.