Saturday, May 18, 2024
spot_imgspot_img
spot_imgspot_img

ಕಲ್ಲಡ್ಕ: ಶಿಲ್ಪಾ ವಾಚ್ ವರ್ಕ್ಸ್ ನ ಮಾಲಕ ಸುರೇಶ್ ನಿಧನ

- Advertisement -G L Acharya panikkar
- Advertisement -

ಕಲ್ಲಡ್ಕ: ಶಿಲ್ಪಾ ವಾಚ್ ವರ್ಕ್ಸ್ ನ ಮಾಲಕ ಸುರೇಶ್ ರವರು ನಿನ್ನೆ ನಿಧನರಾಗಿದ್ದಾರೆ.

ಅನೇಕ ಕಾರಣಗಳಿಂದ ಅವಿಭಜಿತ ದಕ್ಷಿಣ ಕನ್ನಡದ ಭೂಪಟದಲ್ಲಿ ಬಹಳಷ್ಟು ಖ್ಯಾತಿ ಪಡೆದಿದೆ, ಅದರ ಕಾರಣೀಕರ್ತರು ಅನೇಕರಿರಬಹುದು, ಅನೇಕಾನೇಕ ಕಾರಣಗಳಿರಬಹುದು. ಅವರಲ್ಲೊಬ್ಬರು ಕಲ್ಲಡ್ಕ ದಿ.ಶಾಂತರಾಮರು, ಬಹುಮುಖ ಪ್ರತಿಭೆ, ನಾಟಕಕಾರ, ನಿರ್ದೇಶಕ, ನಟ,ಲೇಖಕ, ಸಂಗೀತ ನಿರ್ದೇಶಕ ಅವರು ಮಾತ್ರವಲ್ಲದೆ ಅವರ ಕುಟುಂಬವೇ ಒಂದು ಪ್ರತಿಭಾವಂತರ ಕುಟುಂಬ. ಮೃತ ಸುರೇಶ್ ರವರು ಅವರ ಸಹೋದರರಾಗಿದ್ದಾರೆ.

ಸುರೇಶ್ ರವರು ಜನಾನುರಾಗಿ, ಮಿತಬಾಷಿ, ಸರಳ ಜೀವಿ, ನಗು ಮೊಗದಸರದಾರ, ಪರೋಪಕಾರಿ,ತಾನಾಯಿತು, ತನ್ನ ಕೆಲಸವಾಯಿತು ಎಂದು, ಬದುಕಿದವರು, ಯಾವುದೇ ದುಶ್ಚಟಗಲಿಲ್ಲದೆ ಬದುಕಿದ ವ್ಯಕ್ತಿ, ತಾನು ಮಾಡುವ ವೃತ್ತಿ ವಾಚು ರೀಪೇರಿ ಮಾಡುವುದೇ ಆದರೂ ಅದರಲ್ಲಿ ಕೂಡ ಕಲಾತ್ಮಕತೆಯನ್ನ ರೂಡಿಸಿಕೊಂಡವರಾಗಿದ್ದರು.

- Advertisement -

Related news

error: Content is protected !!