- Advertisement -
- Advertisement -
ಕಾಪು: ಬಸ್ ತಡೆದು ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಚ್ಚಿಲ ಭಾಸ್ಕರ ನಗರ ನಿವಾಸಿ ಶಂಶೀರ್ ಅಹಮದ್ (28) ಹಲ್ಲೆಗೊಳಗಾದ ಬಸ್ ಚಾಲಕ.
ಶಂಶೀರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಯಿಂದ ಕಟೀಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್ ನ್ನು ಮೂಳೂರು ಸುನ್ನಿ ಸೆಂಟರ್ ಬಳಿ ಎಕ್ಸ್ ಪ್ರೆಸ್ ಬಸ್ ಓವಟೇಕ್ ಮಾಡಿಕೊಂಡು ಬಂದು ಬಸ್ಸಿಗೆ ಅಡ್ಡ ನಿಲ್ಲಿಸಿದೆ.
ಬಳಿಕ ಬಸ್ಸಿನಿಂದ ಇಳಿದ ರಾಯಿಜ್, ಸಮೀರ್ ಡಿಜಿ ಮತ್ತು ಹಾಸೀಮ್ ಎಂಬವರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಲ್ಲದೆ ಕಾರಿನಲ್ಲಿ ಬಂದ ಸಲೀಂ, ಖಾದರ್ ಕೂಡ ಬಸ್ಸನ್ನು ಹತ್ತಿ ಅವಾಚ್ಯ ಶಬ್ದದಿಂದ ಬೈದು, ಬಸ್ ನ ಕೀ ತೆಗೆದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -