Saturday, April 27, 2024
spot_imgspot_img
spot_imgspot_img

ಕಾರ್ಕಳ: ಕಸಾಯಿಖಾನೆಗೆ ಪೊಲೀಸ್‌ ದಾಳಿ; 27 ಕೆ.ಜಿ ದನದ ಮಾಂಸ ವಶ; ಓರ್ವನ ಬಂಧನ

- Advertisement -G L Acharya panikkar
- Advertisement -
vtv vitla

ಕಾರ್ಕಳ: ಅಕ್ರಮ ಕಸಾಯಿಖಾನೆಯೊಂದಕ್ಕೆ ಜು.8ರಂದು ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ ಸುಮಾರು 27 ಕೆ.ಜಿ ದನದ ಮಾಂಸ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಸಾಣೂರು ಹೊಳೆ ಸಮೀಪ ಅಬ್ದುಲ್ ರೆಹಮಾನ್ ಯಾನೆ ಫಾರೂಕು ಎಂದು ಗುರುತಿಸಲಾಗಿದೆ. ಶರೀಫ್ ಮತ್ತು ರಜಾಕ್ ಎಂಬ ಉಳಿದ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ.

ಅಬ್ದುಲ್ ರೆಹಮಾನ್ ಮನೆಯಲ್ಲಿ, ಶರೀಫ್ ಮತ್ತು ರಜಾಕ್ ಎಂಬವರು ಸೇರಿಕೊಂಡು ಅಕ್ರಮವಾಗಿ ದನವನ್ನು ಕಡಿದು ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ದನವನ್ನು ಕಡಿದು ಮಾರಾಟ ಮಾಡಲು ಇಟ್ಟಿದ್ದ 27 ಕೆ ಜಿ ದನದ ಮಾಂಸವನ್ನು, 2 ದನವನ್ನು, ಮಾಂಸ ಮಾರಾಟ ಮಾಡಲು ಉಪಯೋಗಿಸಿದ ಟಾಟಾ ಏಸ್ ಗೂಡ್ಸ್ ಟೆಂಪೋ ವಶಕ್ಕೆ ಪಡೆದಿದ್ದಾರೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯ ಪಿಎಸ್ಐ ಪ್ರಸನ್ನ ಕುಮಾರ್ ಮತ್ತು ದಾಮೋದರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದು ಆರೋಪಿಯನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

- Advertisement -

Related news

error: Content is protected !!