Friday, May 17, 2024
spot_imgspot_img
spot_imgspot_img

ಕಾರ್ಕಳ: ಕೋವಿಡ್‌ ಇಂಜೆಕ್ಷನ್‌ ಪಡೆದ ನಂತರ ಕಾಣಿಸಿಕೊಂಡ ಕೈ ನೋವು; ಮನನೊಂದು ಯುವಕ ಆತ್ಮಹತ್ಯೆ

- Advertisement -G L Acharya panikkar
- Advertisement -

ಕಾರ್ಕಳ: ಮಾನಸಿಕ ಖಿನ್ನತೆಗೊಳಗಾಗಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ಕೌಡೂರು ಗ್ರಾಮದಲ್ಲಿ ನಡೆದಿದೆ.

ಕಾರ್ಕಳದ ತಡ್ಪೆದೋಟದ ನಿವಾಸಿ ಪ್ರದೀಪ್ ಪೂಜಾರಿ (37) ಮೃತ ದುರ್ದೈವಿ.

10 ವರ್ಷಗಳ ಕಾಲ ಮುಂಬೈ ಮತ್ತು ಪುಣೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಕಳೆದ ವರ್ಷದಿಂದ ಊರಿನಲ್ಲಿಯೇ ತನ್ನ ಅಣ್ಣ ಉಮೇಶ ಪೂಜಾರಿ ಜೊತೆ ನೆಲೆಸಿದ್ದರು. ಕೊರೋನಾ ಸಮಯದಲ್ಲಿ ಪ್ರದೀಪ್ ಅವರ ಎಡಕೈಗೆ ಇಂಜೆಕ್ಷನ್ ಕೊಟ್ಟ ಪರಿಣಾಮ ಕೈನೋವು ಕಾಣಿಸಿಕೊಂಡಿದ್ದು, ಬಳಿಕ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಮನನೊಂದು ನಿನ್ನೆ ಮನೆಯ ಪಕ್ಕದಲ್ಲಿರುವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!