- Advertisement -
- Advertisement -
ಕಾಸರಗೋಡು: ಚಲಿಸುತ್ತಿದ್ದ ರೈಲಿನಿಂದ ಎಸೆಯಲ್ಪಟ್ಟು ನಿವೃತ್ತ ಯೋಧರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ತೃಕ್ಕರಿಪುರ ಬೀರಿಚ್ಚೇರಿ ರೈಲ್ವೇ ಗೇಟ್ ಬಳಿ ನಡೆದಿದೆ.
ಎರ್ನಾಕುಳಂ ಜಿಲ್ಲೆಯ ಕುತ್ತಾಬ್ ಕುಳಂ ನಿವಾಸಿ ಜೋಯ್ ಅಬ್ರಹಾಂ (೫೮) ಮೃತಪಟ್ಟವರು. ನಿವೃತ್ತರಾದ ಬಳಿಕ ಗೋವಾದಲ್ಲಿ ಸೆಕ್ಯುರಿಟಿ ಸಿಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಜೋಯ್, ಗೋವಾದಿಂದ ಊರಿಗೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಂದೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -