- Advertisement -
- Advertisement -
ಕಾಸರಗೋಡು: ಶೌಚಾಲಯದ ವೇಸ್ಟೇಜ್ ಟ್ಯಾಂಕ್ಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಉಪ್ಪಳ ಪೇಟೆಯ ರಾಷ್ಟ್ರೀಯ ಹೆದ್ದಾರಿ ಬಳಿಯ ಘಟನೆ ನಡೆದಿದೆ, ಮುಸ್ತಫಾ ಮಂಜಿಲ್ನ ಅಬ್ದುಲ್ ಸಮದ್ ಅವರ ಪುತ್ರ ಶೆಹಜಾದ್ ಅಸುನೀಗಿದ ಬಾಲಕ. ಮನೆಯ ಹಿಂಬಾಗದಲ್ಲಿರುವ ಡ್ರೈನೇಜ್ ಟ್ಯಾಂಕ್ನ ಸ್ಲ್ಯಾಬ್ ಕಳಚಿ ಬಿದ್ದು ಈ ಅವಘಢ ಸಂಭವಿಸಿದೆ ಎನ್ನಲಾಗಿದೆ.
ಗುಂಡಿಯ ಸ್ಲ್ಯಾಬ್ನ ಮೇಲೆ ನಡೆಯುತ್ತಿದ್ದಾಗ ಸ್ಲ್ಯಾಬ್ ಕಳಚಿ ಬಿದ್ದು ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ.
- Advertisement -