ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮಶ್ರೀ ಶ್ರೀ ಶ್ರೀಕೃಷ್ಣ ಗುರೂಜಿಯವರ ಶುಭಾಶೀರ್ವಾದಲ್ಲಿ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ದೀಪ ಪ್ರಜ್ವಲನೆ ಮಾಡಿ ಆಶೀರ್ವಚನಾ ಮಾಡಿದರು.
ಸಭೆಯಲ್ಲಿ ಗೌರವ ಉಪಸ್ಥಿತಿ ಶ್ರೀ Mk ಕುಕ್ಕಾಜೆ (ಮೊಕ್ತೇಶರರು ಶ್ರೀ ಕ್ಷೇತ್ರ ಕುಕ್ಕಾಜೆ) ಇದರೊಂದಿಗೆ ದಯಾ ಮೆಲೋಡಿಎಸ್ ಮ್ಯೂಸಿಕಲ್ ಇದರ ಲಾಂಛನ ಲೋಕಾರ್ಪಣೆಯನ್ನು ಶ್ರೀ ದೂಮ ಪೂಜಾರಿ ಬಳ್ಳೂರು ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ದಿನಾಂಕ16-02-2022 ರಿಂದ 18-02-2022ರ ವರೆಗೆ ನಡೆಯುವ ಜಾತ್ರೆಯ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ತಂಡದ ಕಲಾವಿದರನ್ನು ದಯಾ ಕ್ರಿಯೇಷನ್ ವತಿಯಿಂದ ಗೌರವಿಸಲಾಯಿತು ಹಾಗು ದಯಾನಂದ ಅಮೀನ್ ಬಾಯರ್ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷತೆಯನ್ನು ತಂಡದ ಅಧ್ಯಕ್ಷರಾದ ಶ್ರೀ ದಯಾನಂದ ಅಮೀನ್ ಬಾಯರ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ರೇಣುಕಾ ಕಣಿಯೂರು ( ನಿರೂಪಕರು ಬರಹಗಾರರು), ರಾಜೇಶ್ ವಿಟ್ಲ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕರು) ಸದಾಶಿವ ಶೆಟ್ಟಿ ಬೀಡಿನಮಬೈಲು, ಮೊಹಿನಿ ತಾರಿದಾಳ (ಅಧ್ಯಕ್ಷೆ ಮಹಿಳ ಸಂಘ ಕುಕ್ಕಾಜೆ) ಸಂಜೀವ ಪಳನೀರು (ಅಧ್ಯಕ್ಷರು ಕಾಳಿಕಾ ಕಲಾ ಸಂಘ ಕುಕ್ಕಾಜೆ) ಮತ್ತಿತರರು ಉಪಸ್ಥಿತರಿದ್ದರು.
ಕು| ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಉಮಾ ಹರೀಶ್ ಆಲದಪದವು ಸ್ವಾಗತಿಸಿ, ರವಿ ಎಸ್ ಎಂ ಕುಕ್ಕಾಜೆ ವಂದಿಸಿದರು. ತದನಂತರ ತಂಡದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 10ರಿಂದ ಕ್ಷೇತ್ರದಲ್ಲಿ ಶ್ರೀ ಸತ್ಯ ನಾರಾಯಣ ಪೂಜೆ, ಮದ್ಯಾಹ್ನ ದೇವಿಯ ಮಹಾ ಪೂಜೆ ನಡೆಯಿತು.