- Advertisement -
- Advertisement -
ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ಯುವಕನೋರ್ವ ವಸತಿಗೃಹದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಹಾಸನ ಅರಕಗೂಡಿನ ಕುಮಾರ್ ಎಂಬವರು ತೀರ್ಥ ಯಾತ್ರೆಗಾಗಿ ಮನೆಯ ಸದಸ್ಯರೊಂದಿಗೆ ಹೊರಟಿದ್ದರು. ಅವರು ಕೊಲ್ಲೂರಿಗೆ ಆಗಮಿಸಿ ವಸತಿಗೃಹದಲ್ಲಿ ಉಳಿದುಕೊಂಡಿದ್ದರು.
ಈ ವೇಳೆ ಕುಮಾರ್ರವರ ಮಗ ಪ್ರಶಾಂತನು ಶೌಚಾಲಯಕ್ಕೆ ಹೋಗುವುದಾಗಿ ತಿಳಿಸಿ ರೂಮ್ ಕೀಯನ್ನು ಪಡೆದುಕೊಂಡು ಹೋಗಿ ಕೀ ತೆಗೆಯುವ ಸಂದರ್ಭದಲ್ಲಿ ತಲೆ ಸುತ್ತು ಬಂದು ರೂಮಿನ ಹೊರಗಡೆ ಬಿದ್ದಿದ್ದರು. ತಕ್ಷಣವೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವು ಸಾಧ್ಯತೆ ಇದೆಯೆಂದು ಹೇಳಲಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -