- Advertisement -
- Advertisement -
ಸರಿಯಾಗಿ ಐದು ದಿನಗಳ ಹಿಂದಷ್ಟೇ ಕಣಿವೆ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ರು. ಭಾರತೀಯ ಸೇನೆಯ ಐವರು ಯೋಧರನ್ನ ಗುಂಡಿಕ್ಕಿ ಉಗ್ರರು ರಕ್ತ ಹರಿಸಿದ್ದರು. ಇದಕ್ಕೆ ಪ್ರತಿಕಾರವೆಂಬಂತೆ ಭಾರತೀಯ ಸೇನೆ ಮೂವರು ಉಗ್ರರನ್ನ ಹೊಡೆದುರುಳಿಸಿ ತನ್ನ ಎನ್ಕೌಂಟರ್ ಮುಂದುವರಿಸಿತ್ತು. ಆದ್ರೆ ದುರಂತವೆಂಬಂತೆ ಕಾರ್ಯಾಚರಣೆಯಲ್ಲಿ ಮತ್ತೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಮತ್ತೆ ಎನ್ಕೌಂಟರ್ ನಡೆಸಿತ್ತು. ತಡರಾತ್ರಿ ಕಣೆವೆ ರಾಜ್ಯದ ನರ್ ಖಾಸ್ ಅರಣ್ಯ ಪ್ರದೇಶದಲ್ಲಿ ಸೇನಾ ಯೋಧರು ಮತ್ತೆ ಉಗ್ರರ ಬೇಟೆಗಿಳಿದಿದ್ದರು. ಆದ್ರೆ ಕಾರ್ಯಚರಣೆ ವೇಳೆ ಓರ್ವ ಸೇನಾಧಿಕಾರಿ ಹಾಗೂ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಸೇನೆ ಹಾಗೂ ಭಯೋತ್ಪಾಧಕರ ನಡುವಿನ ಗುಂಡಿನ ಚಕಮಕಿಯಲ್ಲಿ ಉತ್ತರಾಖಂಡ್ ಮೂಲದ ವಿಕ್ರಮ್ ಸಿಂಗ್ ನೇಗಿ, ಹಾಗೂ ಯೋಗಂಬರ್ ಸಿಂಗ್ ಹುತಾತ್ಮರಾಗಿದ್ದಾರೆ. ಸದ್ಯ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿರೋದಾಗಿ ಸೇನೆ ತಿಳಿಸಿದೆ.
- Advertisement -