ದೀಪಾವಳಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ.
ಅಕ್ಟೋಬರ್ 22ರಿಂದ 26ರವರೆಗೆ ಗ್ರಾಹಕರು ಒಂದು ಗ್ರಾಂ ಚಿನ್ನ ಖರೀದಿಗೆ 125 ರೂ. ತನಕ ರಿಯಾಯಿತಿ ಪಡೆಯಬಹುದು. ವಜ್ರಾಭರಣಗಳು, ಬೆಳ್ಳಿ ಆಭರಣಗಳು ಹಾಗೂ ಬೆಳ್ಳಿ ಪರಿಕರಗಳಿಗೂ ವಿಶೇಷ ಆಫರ್ ಮಾತ್ರವಲ್ಲದೆ, ಹಬ್ಬದ ಸುಸಂದರ್ಭ ಚಿನ್ನ ಹಾಗೂ ಬೆಳ್ಳಿಯ ದರ ಇಳಿಕೆಯ ಪ್ರಯೋಜನವನ್ನು ಪಡೆಯಬಹುದು.
ಸ್ವರ್ಣೋದ್ಯಮದಲ್ಲಿ 65 ವರ್ಷಗಳಿಂದ ಜನಮನ ಗೆದ್ದು, ಚಿನ್ನಾಭರಣಪ್ರಿಯರ ಮನೆಮಾತಾಗಿ ಕರಾವಳಿ, ಮಲೆನಾಡುಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ ಪುತ್ತೂರು ಮುಖ್ಯ ರಸ್ತೆಯಲ್ಲಿ ಮೂರು ಮಹಡಿಗಳ ಸುಂದರ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಲಿಫ್ಟ್ ಜತೆಗೆ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಮಳಿಗೆ ಇದು. ಗ್ರಾಹಕರಿಗೆ ಆಹ್ಲಾದಕರ ವಾತಾವರಣ ಇಲ್ಲಿದ್ದು, ಎಲ್ಲ ವಯಸ್ಸಿನ, ವಿಭಿನ್ನ ಅಭಿರುಚಿಯ ಗ್ರಾಹಕರಿಗೆ ಒಪ್ಪುವ ಸಂಗ್ರಹಗಳು ಇಲ್ಲಿವೆ. ಪ್ರತಿ ಪೀಳಿಗೆಯ ಚಿನ್ನದ ಮಳಿಗೆ ಎಂಬ ಘೋಷವಾಕ್ಯ ಇಲ್ಲಿ ಸಾರ್ಥಕತೆ ಪಡೆದಿದೆ.
1000ಕ್ಕೂ ಮಿಕ್ಕಿದ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ಗಳು, ವೆಡ್ಡಿಂಗ್ ಕಲೆಕ್ಷನ್, ಪ್ರಾಚಿ ಎಂಬ ಹೆಸರಿನ ಆ್ಯಂಟಿಕ್ ಆಭರಣಗಳು, ಮಕ್ಕಳ, ಮಹಿಳೆಯರ, ಹಾಗೂ ಪುರುಷರ ಅಭಿರುಚಿಗೆ ಒಪ್ಪುವ ಆಭರಣಗಳ ಸಂಗ್ರಹ ಇಲ್ಲಿದೆ. ವ್ಯವಹಾರದಲ್ಲಿ ಪಾರದರ್ಶಕತೆ ಹೊಂದಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್, ಪ್ರತಿ ಅಭರಣಗಳ ಜೊತೆಗೆ ನೀಡುವ ದರಪಟ್ಟಿಯಲ್ಲಿ ಆಭರಣದ ತೂಕ, ಕಲ್ಲಿನ ತೂಕ, ಮಜೂರಿ, ತೇಮನ್ ಇತ್ಯಾದಿ ವಿವರಗಳನ್ನು ಪ್ರತ್ಯೇಕವಾಗಿ ತೋರಿಸುತ್ತದೆ. ಸಂಸ್ಥೆಯಲ್ಲಿ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಕ್ಯಾಶ್ಲೆಸ್ ವ್ಯವಹಾರ ಸುಲಲಿತವಾಗಿ ಮಾಡಬಹುದು.
ಮೂರು ಸಾವಿರ ರೂ.ನಿಂದ 15 ಲಕ್ಷ ರೂ.ತನಕದ ವಜಾಭರಣಗಳ ಸಂಗ್ರಹ ಇಲ್ಲಿದ್ದು, ರಾಜ್ಯದ ಎಕ್ಸ್ ಕ್ಯೂಸಿವ್ ವಜ್ರಾಭರಣ ಸಂಗ್ರಹದ ಕೆಲವೇ ಮಳಿಗೆಗಳಲ್ಲಿ ಇದೂ ಒಂದು. ಅಂತಾರಾಷ್ಟ್ರೀಯ ಲ್ಯಾಬ್ ನೀಡುವ ಸರ್ಟಿಫಿಕೆಟ್ ಹೊಂದಿರುವ ಡೈಮಂಡ್ ಸಂಗ್ರಹ ಜಿ.ಎಲ್.ಜ್ಯುವೆಲ್ಲರ್ನಲ್ಲಿದೆ. ಗುಣಮಟ್ಟ, ನಗುಮುಖದ ಸೇವೆ ಹಾಗೂ ವಿಶ್ವಾಸಾರ್ಹ ವ್ಯವಹಾರದ ಮೂಲಕ ಜನಮನ ಗೆದ್ದು ತನ್ನದೇ ಬ್ಯಾಂಡ್ ಸಂಪಾದಿಸಿ ದ.ಕ., ಉಡುಪಿ, ಕಾಸರಗೋಡು, ಕೊಡಗು, ಹಾಸನ, ಮೈಸೂರು ಮತ್ತು ಬೆಂಗಳೂರು ಭಾಗದಿಂದಲೂ ಚಿನ್ನಾಭರಣ ಪ್ರಿಯರು ಜಿ.ಎಲ್.ಗೆ ಬರುತ್ತಿದ್ದು, ಸಂಸ್ಥೆಯ ಮೇಲಿನ ವಿಶ್ವಾಸವೇ ಇದಕ್ಕೆ ಕಾರಣ ಎನ್ನುತ್ತಾರೆ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ.