- Advertisement -
- Advertisement -
ಉಪ್ಪಿನಂಗಡಿ: ಮುಸುಕುಧಾರಿಗಳ ತಂಡವೊ0ದು ಉಪ್ಪಿನಂಗಡಿ ಹಳೆಗೇಟು ಬಳಿ ಹಿಂದೂ ಯುವಕನೋರ್ವನಿಗೆ ಸೇರಿದ ಅಂಗಡಿ ಬಳಿ ನಿಂತಿದ್ದ ಹಿಂದು ಕಾರ್ಯಕರ್ತನಿಗೆ ಏಕಾಏಕಿ ಬಂದು ಚೂರಿಯಲ್ಲಿ ಇರಿದ ಘಟನೆ ನಡೆದಿತ್ತು.
ಈ ಘಟನೆಯಲ್ಲಿ ದಾಳಿಗೊಳಪಟ್ಟ ಮೋಹನ್ ಶೆಟ್ಟಿ ಕಜೆಕಾರು ಎಂಬವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿನ್ನಲೆ ನೊಂದ ಮೋಹನ್ ಶೆಟ್ಟಿ ಕಜೆಕಾರು ಅವರಿಗೆ ಹಿಂದೂ ಸಮಾಜದ ಯುವಕರು ಧೈರ್ಯ ತುಂಬುವ ಕೆಲಸ ಮಾಡಿದರು. ಆಸ್ಪತ್ರೆಗೆ ಭೇಟಿ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು.
ಈ ವೇಳೆ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಗಿರೀಶ್ ಉಪ್ಪಾರ, ವಿ.ಹಿಂ.ಪ ನಾಯಕ ಸಂತೋಷ್ ಕುಮಾರ್ ರೈ ಕೈಕಾರ, ಮೆಸ್ಕಾಂ ನಿರ್ದೇಶಕ ಕಿಶೋರ್ ಕುಮಾರ್ ಪುತ್ತೂರು, ಸಂತೋಷ್ ಕುಮಾರ್ ಗೌಡ, ಪ್ರವೀಣ್ ಕಾಟುಕುಟ್ಟೆ, ಚೇತನ್ ಕುಮಾರ್, ಅನಿಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದು ಸಾಂತ್ವನ ಹೇಳಿ ಸಹಾಯ ಧನದ ಚೆಕ್ ವಿತರಿಸಿದರು.
- Advertisement -