Saturday, April 27, 2024
spot_imgspot_img
spot_imgspot_img

ಫೆ.7ರಂದು ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮೂಲಸ್ಥಾನ ಚಿತ್ತರಿಗೆಯ ನವೀಕರಣ ಪುನಃ ಪ್ರತಿಷ್ಠಾ ದಶಮಾನ ವರ್ಧಂತ್ಯುತ್ಸವ

- Advertisement -G L Acharya panikkar
- Advertisement -

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಮೂಲಸ್ಥಾನವಾದ ಚಿತ್ತರಿಗೆಯ ನವೀಕರಣ ಪುನಃ ಪ್ರತಿಷ್ಠಾ ದಶಮಾನ ವರ್ಧಂತ್ಯುತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.7ರಂದು ಜರಗಲಿದೆ.

ಫೆ. 6ರ ಭಾನುವಾರದಂದು ನವಚಂಡಿಕಾ ಪಾರಾಯಣ ಕಾರ್ಯಕ್ರಮವು ನಡೆಯಲಿದೆ. ಫೆ. 7ರ ಸೋಮವಾರದಂದು ಬೆಳಗ್ಗೆ 8:00 ಗಂಟೆಗೆ ಪ್ರಾರ್ಥನೆ, ಗಣಪತಿ ಹೋಮ, ನವಚಂಡಿಕಾ ಹೋಮ, ಕಲಶಾಭಿಶೇಕ ಪಂಚಪರ್ವ ಬಳಿಕ ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 4:00 ಗಂಟೆಗೆ ಕರಿಂಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅನಂತಾಡಿ ನೆಟ್ಲಮುಡ್ನೂರು ಇವರಿಂದ ಭಜನಾ ಕಾರ್ಯಕ್ರಮ ಬಳಿಕ ಸಂಜೆ 6:00 ಗಂಟೆಗೆ ಶ್ರೀ ದುರ್ಗಾ ನಮಸ್ಕಾರ ಪೂಜೆ, ಅಲಂಕಾರ ಪೂಜೆ ನಡೆಯಲಿದೆ

ಫೆ. 6 ರಂದು ಹೊರೆಕಾಣಿಕೆ ಹಾಗೂ ಕೇಪುಳ ಹೂವು, ತುಳಸಿ ಕುಡಿಯನ್ನು ಚಿತ್ತರಿಗೆಯಲ್ಲಿ ಅಪರಾಹ್ನದಿಂದ ಸ್ವೀಕರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!