Thursday, March 28, 2024
spot_imgspot_img
spot_imgspot_img

ಬಂಟ್ವಾಳ: ಪಂಪ್ ಶೆಡ್ಡಿಗೆ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ.!

- Advertisement -G L Acharya panikkar
- Advertisement -

ಬಂಟ್ವಾಳ : ಪಂಜಿಕಲ್ಲು ಗ್ರಾಮದ ಎನಿಲಕೋಡಿ ಎಂಬಲ್ಲಿ ಕೃಷಿಕರೊಬ್ಬರ ಪಂಪ್ ಶೆಡ್ಡಿಗೆ ಸಿಡಿಲು ಬಡಿದು ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ.


ಶೆಡ್ಡಿನಲ್ಲಿ ಭಾರೀ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿ ದ್ದು, ಶೆಡ್ಡಿನ ಮಾಡು ಸಂಪೂರ್ಣ ಸುಟ್ಟು ಕುಸಿದು ಬೀಳುತ್ತಿದ್ದಂತೆಯೇ ಒಳಗೆ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ, ತೆಂಗಿನಕಾಯಿ, ಕೊಳವೆ ಬಾವಿ ಪಂಪ್ ಸಹಿತ ಲಕ್ಷಾಂತರ ರೂಪಾಯಿ ಮೊತ್ತದ ವಸ್ತುಗಳು ಸುಟ್ಟು ಕರಕಲಾಗಿದೆ.

ಪ್ರಗತಿಪರ ಕೃಷಿಕ ನಾರಾಯಣ ಸಪಲ್ಯ ಎಂಬವರ ಮನೆ ಮತ್ತು ಅಡಿಕೆ ತೋಟದ ಮಧ್ಯೆ ಇರುವ ಪಂಪ್ ಶೆಡ್ಡಿಗೆ ಶನಿವಾರ ಸಂಜೆ ಸುಮಾರು 8 ಗಂಟೆಗೆ ಸಿಡಿಲು ಬಡಿದಿದ್ದು, ಬೆಂಕಿ ಕೆನ್ನಾಲಗೆ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Related news

error: Content is protected !!