Friday, May 3, 2024
spot_imgspot_img
spot_imgspot_img

ಬಸ್ಸು ಚಾಲಕ ಲಾಡ್ಜ್‌ನಲ್ಲಿ ನಿಗೂಢ ಸಾವು; ಆತ್ಮಹತ್ಯೆ ಹಿಂದಿತ್ತು ಆಂಟಿಯ ಪ್ರೀತಿ..!

- Advertisement -G L Acharya panikkar
- Advertisement -

ಬಸ್ಸು ಚಾಲಕನಿಗೆ ತನಗಿಂತ ಹಿರಿಯ ಮಹಿಳೆಯ ಜೊತೆ ನಂಟು ಬೆಳೆದಿತ್ತು. ಸಲುಗೆ ಗಿಟ್ಟಿಸಿಕೊಂಡಿದ್ದ ಆತ ಲಾಡ್ಜ್‌ಗೆ ಕರೆದುಕೊಂಡು ಹೋಗುದ್ದಾನೆ. ಆ ಬಳಿಕ ಅಲ್ಲಿಂದ ಒಬ್ಬಳೇ ತೆರಳಿದ್ದಳು ಪ್ರಿಯತಮೆ. ಚಾಲಕ ಅನುಮಾನಾಸ್ಪದವಾಗಿ ಸಾವು ಕಂಡಿದ್ದ. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಸಲಿ ಸತ್ಯ ತಿಳಿದುಬಂದಿದೆ.

ಜನವರಿ 30 ರಂದು ನಡೆದ ಬಿಎಂಟಿಸಿ ಚಾಲಕ ಪುಟ್ಟೇಗೌಡ (28) ಅನುಮನಾಸ್ಪದ ಸಾವನ್ನಪ್ಪಿದ್ದ. ಕೇಸ್ ದಾಖಲಿಸಿಕೊಂಡು ಕೊಲೆಯ ರಹಸ್ಯದ ಹಿಂದೆ ಬಿದ್ದಿದ್ದ ಕೆಂಗೇರಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಆಂಟಿ ಪ್ರೀತಿ – ಲಾಡ್ಜ್‌ಗೆ ಕರೆದುಕೊಂಡು ಹೋದ ಯುವಕ ಮೃತ ಚಾಲಕ
ಪುಟ್ಟೇಗೌಡ ಒಂದು ಆಂಟಿಯನ್ನು ಪ್ರೀತಿಸುತ್ತಿದ್ದ. ಕೇವಲ ಆರು ತಿಂಗಳ ಹಿಂದಷ್ಟೇ ಪರಿಚಿತಳಾದ ಮಹಿಳೆಯೊಂದಿಗೆ ಸಲುಗೆ ಬೆಳೆದು ಪ್ರೀತಿಯಾಗಿ ಚಿಗುರಿತ್ತು. ಇಬ್ಬರು ಅಕ್ಕ-ಪಕ್ಕದ ಊರಿನವರಾಗಿದ್ದರಿಂದ ಇಬ್ಬರ ಮಧ್ಯೆ ಉತ್ತಮ ಬಾಂಧವ್ಯ ಬೆಳೆದಿತ್ತು. ಹೀಗಾಗಿ ಮಹಿಳೆಯೊಂದಿಗೆ ಓಡಾಟ ಮಾಡೋದು ಹೆಚ್ಚಾಗಿತ್ತು.

ಇತ್ತೀಚೆಗೆ ಮಹಿಳೆಯನ್ನ ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಒತ್ತಾಯ ಮಾಡುತ್ತಿದ್ದ. ತನಗೆ ಇಬ್ಬರು ಮಕ್ಕಳಿದ್ದಾರೆ, ಜೊತೆಯಲ್ಲಿದ್ದು ಮುಂದುವರೆಯಲು ಸಾಧ್ಯವಿಲ್ಲ ಅಂತಾ ಆ ಮಹಿಳೆ ಹೇಳಿದ್ದಳು. ಈ ಮಧ್ಯೆ ಜನವರಿ 30 ರಂದು ಕೆಲಸಕ್ಕೆ ಬಂದಿದ್ದವ ನೇರವಾಗಿ ಮಹಿಳೆಯ ಭೇಟಿ ಮಾಡಿದ್ದ. ಅದೇ ರೀತಿ ಸಲುಗೆಯಿಂದಲೇ ಮಾತನಾಡುತ್ತ ಕೆಂಗೇರಿ ಲಾಡ್ಜ್‌ವೊಂದಕ್ಕೆ ಮಹಿಳೆಯನ್ನ ಕರೆದೊಯ್ದಿದ್ದ.

ಇಬ್ಬರು ಲಾಡ್ಜ್‌ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಕಳೆದಿದ್ದರು. ನಂತರ ಮಹಿಳೆ ಇಲ್ಲಿಂದ ಹೊರಡೋಣ ಎಂದಿದ್ದಾಳೆ. ಆಗ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಆಕೆಯ ಜೊತೆ ಜಗಳ ಮಾಡಲು ಶುರುಮಾಡಿದ್ದ. ಆಗ ಬರ್ತೀನಿ ಇರು ಎಂದು ಬಾಥ್ ರೂಮ್ ಪುಟ್ಟೇಗೌಡ ಹೋಗಿದ್ದ. ಇದೇ ವೇಳೆ ಮಹಿಳೆ, ಆತನಿಂದ ತಪ್ಪಿಸಿಕೊಳ್ಳಲು ತಪ್ಪಿಸಿಕೊಂಡು ಬಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇನ್ನು ಪುಟ್ಟೇಗೌಡ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋದು ದೃಢಪಟ್ಟಿದೆ. ಹೀಗಾಗಿ ಪುಟ್ಟೇಗೌಡನ ಯಾರೂ ಕೊಲೆ ಮಾಡಿಲ್ಲ ಅನ್ನೋದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಸದ್ಯ ಮಹಿಳೆಯಿಂದ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಐದು ತಿಂಗಳ ಹಿಂದಷ್ಟೇ ಗುತ್ತಿಗೆ ಆಧಾರದಲ್ಲಿ ಪುಟ್ಟೇಗೌಡ ಕೆಲಸಕ್ಕೆ ಸೇರಿದ್ದ. ಕೆಂಗೇರಿ ಪೊಲೀಸರಿಂದ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!