- Advertisement -
- Advertisement -
ಮಂಗಳೂರು: ಸಿಟಿ ಬಸ್ ವೊಂದರ ಮೇಲೆ ತೆಂಗಿನ ಮರ ಉರುಳಿ ಬಿದ್ದ ಘಟನೆ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಮಂಗಳದೇವಿ ಸುರತ್ಕಲ್ ನಡುವೆ ಸಂಚರಿಸುತ್ತಿರುವ 15 ನಂಬರಿನ ಬಸ್ಸು ಇದಾಗಿದೆ. ಈ ಘಟನೆಯಿಂದ ಯಾರಿಗೂ ಏನು ಗಾಯಗಳಾಗಿಲ್ಲ ಎನ್ನಲಾಗಿದೆ. ಬಸ್ ನ ಮೇಲ್ಭಾಗ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಯಶು ಮಾಲಿಕತ್ವದ ಅರಸು ಟ್ರಾವೆಲ್ಸ್ ಬಸ್ಸು ಇದಾಗಿದೆ.
- Advertisement -