Monday, April 29, 2024
spot_imgspot_img
spot_imgspot_img

ಬೈತ್ತಡ್ಕ: ಕಾರು ಹೊಳೆಗೆ ಬಿದ್ದು ದುರಂತ ಸಾವನ್ನಪ್ಪಿದ ಯುವಕರ ಗುರುತು ಪತ್ತೆ

- Advertisement -G L Acharya panikkar
- Advertisement -

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಪತ್ತೆಯಾಗಿದೆ. ಮೃತದೇಹವನ್ನು ಧನುಷ್‌ ಮತ್ತು ಧನಂಜಯ್‌ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.

ಒಬ್ಬನ ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತ ದೇಹ ಬೆಳಕಿಗೆ ಬಂದಿದೆ. ಇನ್ನೊಂದು ಮೃತದೇಹವೂ ಪತ್ತೆಯಾಗಿದೆ. ಮೊದಲ ಶವ ಪತ್ತೆಯಾದ 50 ಮೀಟರ್ ದೂರದಲ್ಲಿ ಇನ್ನೊಂದು ಶವ ಪತ್ತೆಯಾಗಿದೆ.

ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದ ಈ ಪ್ರಕರಣ ಇಂದು ದುರಂತ ಅಂತ್ಯ ಕಂಡಿದೆ. ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ. ವಿಟ್ಲ ಕುಂಡಡ್ಕ ಸಂತ್ಯಡ್ಕ ನಿವಾಸಿ ಧನುಷ್ ಹಾಗೂ ಕನ್ಯಾನದ ಧನಂಜಯ ಮೃತಪಟ್ಟ ದುರ್ದೈವಿಗಳು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕನ್ಯಾನದ ಕೊನಾಲೆ ನಿವಾಸಿಯಾಗಿರುವ ಧನಂಜಯ ಎಂಬಾತ ಲೈಟ್ಸ್‌ & ಸೌಂಡ್ಸ್‌ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಧನುಷ್ ಸಂತ್ಯಡ್ಕ ನಿವಾಸಿಯಾಗಿದ್ದು, ಮರದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತಂದೆ-ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!