Tuesday, May 7, 2024
spot_imgspot_img
spot_imgspot_img

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಆರೋಪಿಯ ಬಂಧನ

- Advertisement -G L Acharya panikkar
- Advertisement -

ಮಂಗಳೂರು ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ನಂತರ ಮದುವೆಯಾಗುವುದಿಲ್ಲ ಎಂದು ಯುವತಿಯ ಬಾಳಿನಲ್ಲಿ ಯುವಕ ಚೆಲ್ಲಾಟವಾಡಿದ ಪ್ರಕರಣ ಮಂಗಳೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಆರೋಪಿ ಮೂಡಬಿದಿರೆ ನಿವಾಸಿ ಅಭಿಷೇಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಮೂಡಬಿದಿರೆ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ. ಸಂತ್ರಸ್ತ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಅಭಿಷೇಕ್ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯ ಮನೆಯಲ್ಲಿ ಮಾತನಾಡಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದು, ನಿಶ್ಚಿತಾರ್ಥದ ದಿನ ಕೂಡ ನಿಗದಿಮಾಡಿ ಪ್ರೀತಿಯ ನಾಟಕವಾಗಿ ಯುವತಿಯನ್ನು ಫ್ರೆಂಡ್ ಪಾರ್ಟಿ ಇದೆ ಎಂದು ನಂಬಿಸಿ ಮೂಡಬಿದಿರೆಯ ಗೋಲ್ಮನ್ ಗೇಟ್ ಲಾಡ್’ಗೆ ಕರೆದುಕೊಂದು ಹೋಗಿ ಯುವತಿಗೆ ಬಿಝ‌ ಕೂಡಿಯುವಂತೆ ಒತ್ತಾಯಿಸಿ ನಂತರ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಈ ಪ್ರಕರಣದ ಆರೋಪಿ ಅಭಿಷೇಕ್‌ನನ್ನು ಪ್ರಕರಣ ದಾಖಲಾದ ತಿಂಗಳ ನಂತರ ಈಗ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಘಟನೆಯ ವಿವರ

ಮಂಗಳೂರಿನ ಯುವತಿಗೆ ಇನ್‌ಸ್ಟಾಗ್ರಾಂನಲ್ಲಿ ಅಭಿಷೇಕ್‌ ಎನ್ನುವ ಯುವಕನ ಪರಿಚಯವಾಗಿದ್ದು, ಸಂತ್ರಸ್ತ ಯುವತಿಗೆ ಪರಿಚಯವಾದ ಅಭಿಷೇಕ್ ಪ್ರೀತಿಯ ನಾಟಕವಾಡಿ, ಪ್ರೀತಿಸುವಂತೆ ಒತ್ತಾಯಿಸಿ ಯುವತಿಯ ಮನೆಯಲ್ಲಿ ಮಾತನಾಡಿ ಮದುವೆಗೆ ಮನೆಯವರನ್ನು ಒಪ್ಪಿಸಿದ್ದು, ನಿಶ್ಚಿತಾರ್ಥದ ದಿನ ಕೂಡ ನಿಗದಿ ಮಾಡಿದ್ದರು. ಫ್ರೆಂಡ್ಸ್ ಪಾರ್ಟಿ ಎಂದು ನಂಬಿಸಿ ಯುವತಿಯನ್ನು ಕರೆದುಕೊಂಡು ಹೋದ ಅಭಿಷೇಕ್‌ ಮೂಡಬಿದಿರೆಯ ಗೋಲ್ಮನ್ ಗೇಟ್ ಲಾಡ್ಜ್‌’ಗೆ ಕರೆದುಕೊಂದು ಹೋಗಿ ಯುವತಿಗೆ ಬಿಝ‌ ಕುಡಿಯುವಂತೆ ಒತ್ತಾಯಿಸಿ ನಂತರ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಳು.

ಅತ್ಯಾಚಾರ ನಂತರ ಯುವತಿಯನ್ನು ಮದುವೆಯಾಗುವುದಿಲ್ಲ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪುಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 376, 417, 420, 506, 109, 34 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನೇ ಮೊದಲು ಇನ್‌ಸ್ಟಾಗ್ರಾಂ ನಲ್ಲಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ, ನಂತರ ಸಂತ್ರಸ್ಥ ಹುಡುಗಿಯ ಮನೆಗೆ ಬಂದು ಮದುವೆಯಾಗುತ್ತೇನೆಂದು ನಂಬಿಸಿದ್ದಾನೆ.ಆದ್ರೆ ಕಳೆದ ಒಂದು ತಿಂಗಳಿನಿಂದ ಯುವತಿಯ ಸಂವರ್ಕಕ್ಕೆ ಸಿಗುತ್ತಿಲ್ಲ ನಂಬರ್ ಅನ್ನು ಸಹ ಆತ ಬ್ಲಾಕ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಊರಿನಲ್ಲಿಯೇ ತಲೆಮರೆಸಿಕೊಂದು ತಿರುಗಿದ್ದಾನೆ ಎಂಬ ಆರೋಪವೂ ಇತ್ತು.

ಮಂಗಳೂರು ಮಹಿಳಾ ಠಾಣೆಯಲ್ಲಿ non – bailable ಕೇಸು ದಾಖಲಾಗಿದ್ದರೂ ಆರೋಪಿಯನ್ನು ಇನ್ನೂ ಸಹ ಬಂಧಿಸಿಲ್ಲ ಎಂದು ಸಂತ್ರಸ್ತ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದರು. ಆರೋಪಿ ಇನ್ನೂ ಸಹ ಬಂಧಿಸಿಲ್ಲ ಊರಿನಲ್ಲೇ ತಿರುಗಾಡುತ್ತಿದ್ದು ಪೊಲೀಸ್ ಇಲಾಖೆ ಬಂಧಿಸಿಲ್ಲ. ಆರೋಪಿ ಅಭಿಷೇಕ್ ತಂದೆ ಶ್ಯಾಮ್ ಸುಂದರ, ತಾಯಿ ಭಾರತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಯ ಈ ರೀತಿ ಮಾಡಲು ತಂದೆ ತಾಯಿಯ ಕುಮ್ಮಕ್ಕು ಇದೆ ಎನ್ನಲಾಗಿದೆ.

ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ಮೋಸದ ಬಲೆಗೆ ಬಿದ್ದ ಯುವತಿ

- Advertisement -

Related news

error: Content is protected !!