- Advertisement -
- Advertisement -
ಮಂಗಳೂರು: ಹರ್ಷ ಹತ್ಯೆ ಕೇಸ್ ಗೆ ಸಂಬಂಧಿಸಿ ‘ಮಂಗಳೂರು ಮುಸ್ಲಿಂ’ ಫೇಸ್ಬುಕ್ ಪೇಜ್ ವಿರುದ್ಧ ಸಿಐಡಿ (ಅಪರಾಧ ತನಿಖಾ ದಳ) ತನಿಖೆ ಆರಂಭಿಸಿದೆ.
ಹರ್ಷ ಹತ್ಯೆಗೆ ಸಂಬಂಧಿಸಿ ಫೇಸ್ ಬುಕ್ ಪೇಜ್ ನ ಸಹಭಾಗಿತ್ವದ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಹರ್ಷ ಈ ಹಿಂದೆ ಇಸ್ಲಾಂ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ್ದ ಎನ್ನಲಾಗಿತ್ತು ಆತನ ಬಗ್ಗೆ ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಬರೆಯಲಾಗಿತ್ತು. ಈ ಬರಹ ಹರ್ಷ ಹತ್ಯೆಯ ವೇಳೆ ಭಾರೀ ವೈರಲ್ ಆಗಿತ್ತು. ಆ ಬಳಿಕ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ವಿಭಾಗವು ಬೆಂಗಳೂರಿನ ಅತೀಕ್ ಷರೀಫ್ ಮತ್ತು ‘ಮಂಗಳೂರು ಮುಸ್ಲಿಮ್ಸ್ ಫೇಜ್ ‘ ನ ನಿರ್ವಾಹಕರ ವಿರುದ್ಧ ಫೆಬ್ರವರಿ 23 ರಂದು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿತ್ತು.
- Advertisement -