- Advertisement -
- ಬಾಗಲಕೋಟೆ: ಮದ್ಯದ ನಶೆ ಹತ್ತಿದರೆ ಜನರ ಎಡವಟ್ಟು ಜಾಸ್ತಿ ಇರುತ್ತದೆ. ಇಲ್ಲೊಬ್ಬ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಮೊಸಳೆ ಹಿಡಿಯುವುದಾಗಿ ಹೇಳಿ ಕೆರೆಗೆ ಧುಮುಕಿ ಈಜು ಬಾರದೆ ಚಡಪಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
- ಮೌಲಾಸಾಬ್ ವಾಲೀಕಾರ ಎಂಬಾತನೇ ಮೊಸಳೆ ಹಿಡಿಯುವ ದುಸ್ಸಾಹಸ ಮಾಡಿ ಕೆರೆಗೆ ಧುಮುಕಿದಾತ. ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಮೊಸಳೆ ಕಂಡು ಬಂದಿತ್ತು. ಮೊಸಳೆ ನೋಡಲು ಕೆರೆ ಬಳಿ ಸಾಕಷ್ಟು ಜನ ಬರುತ್ತಿದ್ದರು.
- ಇದೇ ವೇಳೆ ಅಲ್ಲಿಗೆ ಬಂದಿದ್ದ ಮದ್ಯದ ಅಮಲಿನಲ್ಲಿದ್ದ ಮೌಲಾಸಾಬ್, ತಾನು ಮೊಸಳೆ ಹಿಡಿಯುವುದಾಗಿ ಕೆರೆಗೆ ಹಾರಿದ್ದಾನೆ. ಆದರೆ ಕೆರೆಯ ಮಧ್ಯಕ್ಕೆ ಹೋದ ಮೌಲಾಸಾಬ್ಗೆ ಈಜಲು ಸಾಧ್ಯವಾಗದೆ ನೀರಲ್ಲಿ ಮುಳುಗಲಾರಂಭಿಸಿದ್ದಾನೆ. ಈ ವೇಳೆ ಆತನನ್ನು ಗಮನಿಸಿದ ನೆರೆದಿದ್ದ ಜನ ಆತನನ್ನು ರಕ್ಷಿಸಲು ನಾನಾ ಪ್ರಯತ್ನಗಳನ್ನು ಮಾಡಿ ಕೊನೆಗೂ ಸುರಕ್ಷಿತವಾಗಿ ದಡ ಸೇರಿಸಿದ್ದಾರೆ.
- ಮದ್ಯದ ನಶೆಯಲ್ಲಿ ತಾನು ಮಾಡಿರುವ ಎಡವಟ್ಟಿನಿಂದ ಜನರೆದುರು ಮುಖಭಂಗಕ್ಕೊಳಗಾದ ಮೌಲಾಸಾಬ್ ಬಳಿಕ ಸ್ಥಳದಿಂದ ಸೀದಾ ತೆರಳಿದ್ದಾನೆ.
YOU MIGHT ALSO LIKE
- Advertisement -