Friday, April 26, 2024
spot_imgspot_img
spot_imgspot_img

ಮಾ.1 ರಂದು ಹಿಂದು ಜಾಗರಣ ವೇದಿಕೆ ಮತ್ತು ಶ್ರಿ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಶಿವರಾತ್ರಿ ಮತ್ತು ಶಿವಮಾಲಧಾರಣೆಯ ಪ್ರಯುಕ್ತ 1ಕೋಟಿ ಶಿವಪಂಚಾಕ್ಷರಿ ನಾಮ ಜಪ

- Advertisement -G L Acharya panikkar
- Advertisement -

ಬಂಟ್ವಾಳ: ಹಿಂದು ಜಾಗರಣ ವೇದಿಕೆ ಮತ್ತು ಶ್ರಿ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಕ್ಷೇತ್ರದ ಪಾವಿತ್ರ್ಯತೆ ರಕ್ಷಣೆಯ ಸಂಕಲ್ಪಕ್ಕಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಶಿವರಾತ್ರಿ ಮತ್ತು ಶಿವಮಾಲಧಾರಣೆಯ ಪ್ರಯುಕ್ತ ಮಾ.1ರಂದು ಸೋಮವಾರ ಸಂಜೆ 6:30ಕ್ಕೆ ಏಕ ಕಾಲದಲ್ಲಿ 1ಕೋಟಿ ಶಿವಪಂಚಾಕ್ಷರಿ ನಾಮ ಜಪ ನಡೆಯಲಿದೆ.

vtv vitla
vtv vitla

ಸಂಜೆ 4ಕ್ಕೆ ವಗ್ಗ ಕಾರಿಂಜ ದ್ವಾರದಿಂದ ಶಿವನಾಮ ಸಂಕೀರ್ತನಾ ಯಾತ್ರೆ, ಜೊತೆಗೆ ರಾತ್ರಿ ಭಜನೆ, ಸಂಕೀರ್ತನೆಯೊಂದಿಗೆ ಶಿವರಾತ್ರಿ ಜಾಗರಣೆ ನಡೆಯಲಿರುವುದು

ಪ್ರತಿಯೊಬ್ಬ ಹಿಂದುವು ಈ ನಾಮ ಜಪದಲ್ಲಿ ಪಾಲ್ಗೊಳ್ಳ ಬಹುದು, ಮಾ. 1ರಂದು ಶಿವರಾತ್ರಿಯ ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ನಾವು ಇದ್ದ ಸ್ಥಳದಲ್ಲಿಯೇ 108 ಶಿವ ಪಂಚಾಕ್ಷರಿ ಮಂತ್ರವಾದ ಓಂ ನಮಃ ಶಿವಾಯ ನಾಮ ಜಪ ಮಾಡುವುದು, ಈ ನಾಮ ಜಪದಿಂದ ಕ್ಷೇತ್ರ ಸಂರಕ್ಷಣೆಯ ಹೋರಾಟಕ್ಕೆ ಮತ್ತು ಕ್ಷೇತ್ರದಲ್ಲಿ ಶಿವ ಶಕ್ತಿಯ ಚೈತನ್ಯ ಜಾಗೃತವಾಗಲು ಸಹಕಾರಿಯಾಗಲಿದೆ ಎಂದು ಹಿಂದು ಜಾಗರಣ ವೇದಿಕೆ ಮತ್ತು ಶ್ರಿ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!