- Advertisement -
- Advertisement -
ಹೈದರಾಬಾದ್ : ಶನಿವಾರ ಮುಂಜಾನೆ ಹೈದಾರ್ಬಾದ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವ ಪತ್ರಕರ್ತೆ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈಟಿವಿ ಭಾರತ್ನ ಉತ್ತರ ಪ್ರದೇಶ ಡೆಸ್ಕ್ನ ಮಹಾರಾಷ್ಟ್ರ ಮೂಲದ
ಕೇರಳ ಡೆಸ್ಕ್ನ ಕಂಟೆಂಟ್ ಎಡಿಟರ್ ನಿವೇದಿತಾ ಸೂರಜ್ (26) ರಸ್ತೆ ಅಪಘಾತಕ್ಕೆ ಬಲಿಯಾದ ನತದೃಷ್ಟೆಯಾಗಿದ್ದಾರೆ. .ಜೊತೆಗೆ ಉತ್ತರ ಪ್ರದೇಶ ಡೆಸ್ಕ್ನ ಮಹಾರಾಷ್ಟ್ರ ಮೂಲದ ಸೋನಾಲಿ ಚಾವ್ರ ಗಂಭೀರವಾಗಿ ಗಾಯಗೊಂಡಿದ್ದು, ಹೈದರ್ಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೈದರಾಬಾದ್ನ ಹಯತ್ ನಗರದ ಭಾಗ್ಯಲತಾ ಎಂಬಲ್ಲಿ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ನಿವೇದಿತಾ ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ 5 ಗಂಟೆಗೆ ಕಚೇರಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಎಲ್ ಬಿ ನಗರದಿಂದ ಹಯತ್ ನಗರಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ನಿವೇದಿತಾ ಸೂರಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
- Advertisement -