- Advertisement -
- Advertisement -
ಇನ್ಮುಂದೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಗೋಸಾಗಾಟ ವಾಹನ ಸಂಚರಿಸಬಾರದು, ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಗೃಹ ಸಚಿವ ಆರಗ ಜ್ಞಾನೇಂದ್ರರವರು ಪೊಲೀಸರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಗೋ ಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸಿದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ಕೈ ಕಟ್ಟಿಕುಳಿತರೆ ಸರ್ಕಾರ ಯಾಕೆ ಮಣ್ಣು ತಿನ್ನಲು ಕಾಯ್ದೆ ತಂದಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಇನ್ನೂ ಸಮ್ಮನೆ ಇರಲು ಆಗುವುದಿಲ್ಲ. ಅಕ್ರಮ ಗೋಸಾಗಾಟ ಸಂಪೂರ್ಣ ಬಂದ್ ಆಗಬೇಕು. ನಿಮಗೆ ರಕ್ಷಣೆ ನೀಡುವ ಯೋಗ್ಯತೆ ಇಲ್ಲದಿದ್ದರೆ ಎಲ್ಲಿಯಾದರು ಹೋಗಿ ಸಾಯಿರಿ, ಜನರ ಪ್ರಾಣದ ಜೊತೆ ಆಟ ಆಡ್ಬೇಡಿ ಎಂದು ಅವರು ಪೊಲೀಸರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
- Advertisement -