Saturday, May 4, 2024
spot_imgspot_img
spot_imgspot_img

ವಿಟ್ಲ: ಅನ್ಯಕೋಮಿನ ತಂಡದಿಂದ ಹಲ್ಲೆಗೊಳಗಾದ ರಕ್ಷಿತ್ ಪರಿಸ್ಥಿತಿ ಚಿಂತಾಜನಕ…!

- Advertisement -G L Acharya panikkar
- Advertisement -

ವಿಟ್ಲ: ಕುದ್ದುಪದವುನಲ್ಲಿ ಲಾರಿ ಒರೆಸಿಕೊಂಡು ಹೋದ ವಿಚಾರದಲ್ಲಿ ಹಲ್ಲೆಗೊಳಗಾದ ರಕ್ಷಿತ್ ಸ್ಥಿತಿ ಚಿಂತಾಜನಕವಾಗಿದೆ. ತಲೆಗೆ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಕ್ಷಿತ್ ಎಂಬವರು ಬೈಕ್ ನಲ್ಲಿ ಅಡ್ಯನಡ್ಕದಿಂದ ಮೈರದಲ್ಲಿರುವ ತನ್ನ ಮನೆಗೆ ಹೋಗುವಂತ ಸಂದರ್ಭ ಮೈರ ಎಂಬಲ್ಲಿ ಕರವೀರ ಬಸ್ ಸ್ಟಾಂಡ್ ಬಳಿ ರಕ್ಷಿತ್ ಎಂಬವರಿಗೆ ತಲವಾರು ಮತ್ತು ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಗಿರೀಶ್ ಎಂಬವರು ಅಡ್ಯನಡ್ಕದಿಂದ ತನ್ನ ಬಾವನ ಮನೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಹಲ್ಲೆ ನಡೆಸುತ್ತಿದ್ದನ್ನು ನೋಡಿ ತನ್ನ ಆಟೋ ನಿಲ್ಲಿಸಿ ಹೋಗಿ ಬೊಬ್ಬೆ ಹಾಕಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡ ರಕ್ಷಿತ್ ನನ್ನು ತನ್ನ ಆಟೋದಲ್ಲಿ ಎತ್ತಿ ಹಾಕುವಾಗ ಹಿಂದಿನಿಂದ ಬಂದ ಆರೋಪಿಗಳು ಗಿರೀಶ್ ಎಂಬುವರ ಮೇಲೂ ತಲವಾರಿನಿಂದ ಬೆನ್ನಿಗೆ ಹಲ್ಲೆ ನಡೆಸಿದ್ದಾರೆ. ರಕ್ಷಿತ್ ಎಂಬವರಿಗೆ ತಲೆಗೆ ಗಂಭೀರ ಗಾಯಗೊಂಡಿದ್ದು ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೊಳಗಾದ ರಕ್ಷಿತ್ ಸ್ಥಿತಿ ಚಿಂತಾಜನಕವಾಗಿದೆ.

ಆರೋಪಿಗಳು ಉಕ್ಕುಡ ದರ್ಬೆಯ ಸಿದ್ಧಿಕ್, ಜಾಬೀರ್, ಆಶ್ರಫ್ ಎಂದು ಗಿರೀಶ್ ನವರು ದೂರು ನೀಡಿದ್ದಾರೆ. ಫಾದರ್ ಮುಲ್ಲರ್ ಆಸ್ಪತ್ರೆಗೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!