- Advertisement -
- Advertisement -
ವಿಟ್ಲ: ಸಾಮಾಜಿಕ ಹೋರಾಟದ ಮೂಲಕ ದೇಶಿಯ ಮಟ್ಟದಲ್ಲಿ ಖ್ಯಾತಿ ಪಡೆದ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಭವ್ಯ ನರಸಿಂಹಮೂರ್ತಿಯವರು ವಿಟ್ಲ ಸಮೀಪದ ಕೊಡಂಗಾಯಿ ಎಂಬಲ್ಲಿಗೆ ಆಗಮಿಸಿದರು. ಅವರ ಅಪ್ಪಟ ಅಭಿಮಾನಿ ಸಮದ್ ಅಬುಧಾಬಿ ಇವರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು.

ಇವರನ್ನು ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ ಬಿ, ಅನಿವಾಸಿ ಉದ್ಯಮಿ ಇಬ್ರಾಹಿಂ ಅರಫಾ, ಹಾಗೂ ನಾಡಿನ ಹಲವು ಸಂಘ ಸಂಸ್ಥೆಗಳ ನೇತಾರರಾದ ನಾಸಿರ್ ಕೊಡಂಗಾಯಿ, ಮಜೀದ್ ಟಿ ಎಮ್, ಹಾರಿಸ್ ಕೊಡಂಗಾಯಿ, ಇವರು ಹೂ ಗುಚ್ಛ ನೀಡಿ ಸ್ವಾಗತಿಸಿದರು.

ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡ ಭವ್ಯ ನರಸಿಂಹಮೂರ್ತಿಯನ್ನು ವಿಟ್ಲ ಪಡ್ನೂರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಝರುದ್ದೀನ್ ಕೊಡಂಗಾಯಿ ಹಾಗೂ ಮದುಮಗ ಸಮದ್ ಅಬುಧಾಬಿ ಇವರು ಸ್ಮರಣಿಕೆ ನೀಡಿ ಅಭಿನಂದಿಸಿದರು, ಸತ್ತಾರ್ ಟಿಪ್ಪುನಗರ ಶುಭಹಾರೈಸಿ ವಂದಿಸಿದರು.

- Advertisement -








