ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ. 23ರ ಮಂಗಳವಾರದಂದು ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಆಲಂಪಾಡಿ ಪದ್ಮನಾಭ ತಂತ್ರಿಗಳು ಮತ್ತು ವೇದಮೂರ್ತಿ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಪಂಚಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಹಾಗೂ ಕ್ಷೇತ್ರದ ಸಿದ್ಧಿ ವಿನಾಯಕ ಸನ್ನಿಧಿಯಲ್ಲಿ, 108 ಕಾಯಿಗಳ ಗಣಪತಿ ಹೋಮ ಮತ್ತು ಮೂಡಪ್ಪ ಸೇವೆ ಸಹಿತ ಮಹಾರಂಗಪೂಜೆ ನಡೆಯಲಿದೆ.
ಕಾರ್ಯಕ್ರಮಗಳು:
ಬೆಳಗ್ಗೆ ಗಂಟೆ 8.00ಕ್ಕೆ-ಸಾಮೂಹಿಕ ಪ್ರಾರ್ಥನೆ
ಬೆಳಗ್ಗೆ ಗಂಟೆ 8.30ಕ್ಕೆ : ಶತ ರುದ್ರಾಭಿಷೇಕ ಪ್ರಾರಂಭ
ಬೆಳಿಗ್ಗೆ ಗಂಟೆ 9.00ಕ್ಕೆ: 108 ಕಾಲಗಳ ಗಣಪತಿ ಹೋಮ ಪ್ರಾರಂಭ ಬೆಳಗ್ಗೆ ಗಂಟೆ 11.00ಕ್ಕೆ: ಪೂರ್ಣಾಹುತಿ ಮಧ್ಯಾಹ್ನ ಗಂಟೆ 12.15ಕ್ಕೆ: ಪಂಚಲಿಂಗೇಶ್ವರ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ ಗಂಟೆ 6.00ಕ್ಕೆ: ಪಂಚಲಿಂಗೇಶ್ವರ ದೇವರಿಗೆ, ದೀಪಾರಾಧನೆ ಸಂಜೆ ಗಂಟೆ 6.30ಕ್ಕೆ: ಮೂಡಪ್ಪ ಸೇವೆ, ಸಾಮೂಹಿಕ ರಂಗ ಪೂಜೆ, ಶ್ರೀ ದೇವರಿಗೆ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿರುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.