Friday, April 26, 2024
spot_imgspot_img
spot_imgspot_img

ವಿಟ್ಲ: ಪ್ರಯಾಣಿಕರ ಪ್ರಾಣದ ಜೊತೆ ಖಾಸಗಿ ಬಸ್ ಚಾಲಕರ ಚೆಲ್ಲಾಟ; ಕ್ರೈಂ ವರದಿಗಾರರು ವಿಟಿ ಪ್ರಸಾದ್ ರಿಂದ ದೂರು ದಾಖಲು

- Advertisement -G L Acharya panikkar
- Advertisement -

ವಿಟ್ಲ: ಇಮಾಕ್ಯುಲೇಟ್-ಮಣಿಕಂಠ ಬಸ್ಸುಗಳ ನಡುವೆ ಅಪಘಾತ ನಡೆದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕಡಂಬು ಮೈತ್ರೇಯಿ ಗುರುಕುಲ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಎರಡು ಬಸ್‘ಗಳನ್ನು ವಶಕ್ಕೆ ಪಡೆದುಕೊಂಡಿದ್ದು ಎಫ್ ಐ ಆರ್ ದಾಖಲಾಗಿದೆ.

ಟೈಮಿಂಗ್ಸ್ ವಿವಾದ, ಓವರ್ ಟೇಕ್ ಭರಾಟೆಯೊಂದಿಗೆ ಖಾಸಗಿ ಬಸ್, ಬಸ್ ಚಾಲಕರು ಪ್ರಯಾಣಿಕರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವುದು ಪ್ರತಿನಿತ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದೆ.

ಇದರಿಂದಾಗಿ ಕ್ರೈಮ್ ವರದಿಗಾರ ವಿ.ಟಿ ಪ್ರಸಾದ್ ರವರು ಎರಡೂ ಬಸ್ ಚಾಲಕರ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ವಿಟಿವಿ ಗೆ ಪ್ರತಿಕ್ರಿಯೆ ನೀಡಿದ ದುರುದಾರರಾದ ವಿಟಿ ಪ್ರಸಾದ್ ರವರು ವಿಟ್ಲದಲ್ಲಿ ಖಾಸಗಿ ಬಸ್ ಗಳ ಓವರ್ ಟೇಕ್ ಮತ್ತು ಬೇಕಾಬಿಟ್ಟಿ ಓಡಾಟವು ಸಾರ್ವಜನಿಕರಿಗೆ ಹಲವಾರು ತೊಂದರೆಯುಂಟಾಗಿದ್ದು, ಈಗಾಗಲೇ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಮಾಧ್ಯಮಕ್ಕೆ ಮತ್ತು ವಿಟ್ಲ ಠಾಣೆಗೆ ಬಂದಿರುತ್ತದೆ. ಅದಾಗಿಯೂ ಸಾರ್ವಜನಿಕರಿಗೆ ಸರಿಯಾದ ಸ್ಥಳದಲ್ಲಿ ಬಸ್ ನಿಲ್ಲಿಸದೆ, ಇತರ ವಾಹನ ಚಾಲಕರಿಗೆ ಸೈಡ್ ನೀಡದೆ, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಮಾರ್ಗ ಮಧ್ಯೆ ನಿಲ್ಲಿಸಿದ ದುರುಗಳು ಮಾಧ್ಯಮಕ್ಕೆ ಬಂದಿದ್ದವು.

ಇಂದು ವಿಟ್ಲ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ವೇಳೆ ನನ್ನ ಕಣ್ಣಾರೆ ಕಂಡ ದೃಶ್ಯ ಈ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಇನ್ನಾದರೂ ಪೊಲೀಸ್ ಡಿಪಾರ್ಟ್ಮೆಂಟ್ ಹಾಗೂ ಸಾರಿಗೆ ಅಧಿಕಾರಿಗಳು ಬಸ್ ಚಾಲಕರು ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡುವುದರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕಾಗಿ ಸ್ಪಷ್ಟನೆ ನೀಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!