Friday, March 29, 2024
spot_imgspot_img
spot_imgspot_img

ವಿಟ್ಲ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ ಸಿ ಟ್ರಸ್ಟ್(ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ ವಲಯದ ನೂತನ ಒಕ್ಕೂಟ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ರಿಜಿಸ್ಟರ್ ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ ವಲಯದ ನೂತನ ಸ್ವ ಸಹಾಯ ಸಂಘಗಳ ಒಕ್ಕೂಟ ಕೆಲಿಂಜ ಒಕ್ಕೂಟದ ಉದ್ಘಾಟನೆಯು ದೇವಾಡಿಗ ಸಮುದಾಯ ಭವನ ಮಂಗಲಪದವು ಇಲ್ಲಿ ಕಲ್ಲಡ್ಕ ವಲಯಾಧ್ಯಕ್ಷ ಈಶ್ವರ ನಾಯ್ಕ ದೀಪ ಬೆಳಗಿಸಿ ನೂತನ ಅಧ್ಯಕ್ಷರಿಗೆ ಫಲ ತಾಂಬೂಲ ನೀಡಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ನೂತನ ಒಕ್ಕೂಟದ ರಚನೆ ಹಾಗೂ ಅದರ ಉದ್ದೇಶ ಸದಸ್ಯರ ಜವಾಬ್ದಾರಿ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಕೆಲಿಂಜ ಒಕ್ಕೂಟದ ನೂತನ ಅಧ್ಯಕ್ಷರಾಗಿ ಶ್ರೀ ಉಳ್ಳಾಲ್ತಿ ತಂಡದ ದಯಾನಂದ ಗೌಡ.ಬಿ .ಬೊಡ್ಡೋಣಿ, ಉಪಾಧ್ಯಕ್ಷರಾಗಿ ಪಂಚಶ್ರಿ ತಂಡದ ಶ್ಯಾಮಲಾ, ಕಾರ್ಯದರ್ಶಿಯಾಗಿ ಧರ್ಮವಿವೇಕ ತಂಡದ ಸೌಮ್ಯ , ಜೊತೆ ಕಾರ್ಯದರ್ಶಿಯಾಗಿ ಬಿಸ್ಮಿಲ್ಲಾ ತಂಡದ ಸುಮಯ್ಯ, ಕೋಶಾಧಿಕಾರಿಯಾಗಿ ಧರ್ಮಶ್ರೀ ತಂಡದ ಭುವನೇಶ್ವರಿ ಕಾಮಟ ಆಯ್ಕೆಯಾಗಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿಯಾದ ರೇಣುಕಾ ಹಾಗೂ ಒಕ್ಕೂಟ ವ್ಯಾಪ್ತಿಯ 37 ಗುಂಪಿನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!