- Advertisement -
- Advertisement -
ವಿಟ್ಲ: ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಕೆ ಐ ಸುಬ್ರಹ್ಮಣ್ಯ ಭಟ್ ಸೇರಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಂಗಳೂರು ದ ಕ ಜಿಲ್ಲಾ ಹಾಲು ಒಕ್ಕೂಟದ ಅಧಿಕಾರಿಗಳಾದ ದೇವರಾಜ್ ಮತ್ತು ಡಾ| ಅನುದೀಪ್ ಹೈನುಗಾರಿಕೆಯ ಮಾಹಿತಿ ನೀಡಿದರು. ಸಂಘದ ಹಿರಿಯ ಸದಸ್ಯ ಬೋಜಪ್ಪ ಗೌಡ ಇವರನ್ನು ಸನ್ಮಾನಿಸಲಾಯಿತು.
ಸಂಘವು ಪ್ರಸಕ್ತ ವರ್ಷದಲ್ಲಿ 4.71 ಲಕ್ಷ ರುಪಾಯಿ ಲಾಭ ಗಳಿಸಿದ್ದು ಶೇಕಡಾ 25 ಡಿವಿಡಂಡ್ ಘೋಷಿಸಲಾಯಿತು. ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಲೆಕ್ಕಪತ್ರ ಮಂಡಿಸಿ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಗೋಪಾಲ ಎಂ ನಿರ್ದೇಶಕರುಗಳಾದ ಮೋಹನ ಕೆ, ಪುಷ್ಪರಾಜ, ಬಾಲಚಂದ್ರ ನಾಯಕ್, ಲೋಕನಾಥ ಶೆಟ್ಟಿ, ಜಯರಾಮ ಬಲ್ಲಾಳ್, ಗಣೇಶ್ ರೈ, ಆನಂದ ಶೆಟ್ಟಿ, ಗಿರಿಜಾ ಮತ್ತು ರೇವತಿ ಉಪಸ್ಥಿತರಿದ್ದರು.
- Advertisement -