- Advertisement -
- Advertisement -
ಸುಳ್ಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವ್ಯಕ್ತಿರ್ಯೊವ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಮೇನಾಲ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿ ಸ್ಥಳೀಯ ನಿವಾಸಿ ಅಬ್ದುಲ್ಲ (51 ವರ್ಷ) ಎಂದು ಗುರುತಿಸಲಾಗಿದೆ.
ಇನ್ನು ತುಂಬಾ ಹೊತ್ತು ಕಾಣದೆ ಇದ್ದಾಗ ಮನೆಯವರು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದರು. ಕೆರೆಯ ಸಮೀಪ ಅವರು ಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಮೃತ ದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.
ಮೃತಪಟ್ಟ ಅಬ್ದುಲ್ಲ ಅವರಿಗೆ ಬಹಳ ಸಮಯದಿಂದ ಪಿಡ್ಸ್ ಕಾಯಿಲೆ ಇದ್ದು ಆಗಾಗ ಈ ಕಾಯಿಲೆಗೆ ತುತ್ತಾಗಿ ಏಕಾಏಕಿ ಬೀಳುತ್ತಿದ್ದರು ಎನ್ನಲಾಗಿದೆ. ಈ ಘಟನೆಗೂ ಕೂಡ ಇದೇ ಕಾರಣವಿರಬಹುದೆಂದು ಊಹಿಸಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
- Advertisement -