Friday, April 26, 2024
spot_imgspot_img
spot_imgspot_img

ನಾಳೆ ರಾಜ್ಯದಲ್ಲಿ ಕೊರೋನಾ ಲಸಿಕೆ ದೊರೆಯುವುದಿಲ್ಲ!

- Advertisement -G L Acharya panikkar
- Advertisement -

ಬೆಂಗಳೂರು: ಕೊರೋನಾ ಲಸಿಕೆಯ ತೀವ್ರ ಕೊರತೆ ಹಿನ್ನೆಲೆಯಲ್ಲಿ ನಾಳೆ 18ರಿಂದ 44 ವರ್ಷದವರಿಗೆ ರಾಜ್ಯದಲ್ಲಿ ಕೊರೋನಾ ಲಸಿಕೆ ದೊರೆಯುವುದಿಲ್ಲ. ಆರೋಗ್ಯ ಸಚಿವ ಡಾ. ಸುಧಾಕರ್ ಈ ಮಾಹಿತಿ ನೀಡಿದ್ದಾರೆ.

ಲಸಿಕೆಗೆ ಸರ್ಕಾರ ಈಗಾಗಲೇ ಆರ್ಡರ್ ಮಾಡಿದೆ. ಆದರೆ ಅದರ ಪೂರೈಕೆ ಬಗ್ಗೆ ಔಷಧ ಸಂಸ್ಥೆಗಳಿಂದ ಪ್ರತಿಕ್ರಿಯೆ ಬಂದಿಲ್ಲ. ಪೂರೈಕೆ ಕುರಿತಂತೆ ಮಾಹಿತಿ ದೊರೆತ ಕೂಡಲೇ ಲಸಿಕೆ ಅಭಿಯಾನದ ಬಗ್ಗೆ ತಿಳಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರಗಳು ತಮ್ಮ ಬಳಿ ದಾಸ್ತಾನು ಇರುವ ಲಸಿಕೆಯನ್ನು ಆದ್ಯತಾ ವಲಯಕ್ಕೆ ಮಾತ್ರ ನೀಡಬೇಕು ಕೇಂದ್ರ ಸರ್ಕಾರ ಸೂಚಿಸಿದೆ.

- Advertisement -

Related news

error: Content is protected !!