Tuesday, May 7, 2024
spot_imgspot_img
spot_imgspot_img

ವಿಟ್ಲ: ಮಗುವಿನ ಚಿಕತ್ಸೆಗಾಗಿ ಕ್ಲಿನಿಕ್ ಗೆ ಹೋಗುವ ವೇಳೆ ದಂಪತಿ ಮೇಲೆ ಕಿಡಿಗೇಡಿಗಳ ಹಲ್ಲೆ : ಪ್ರಕರಣ ದಾಖಲು

- Advertisement -G L Acharya panikkar
- Advertisement -

ವಿಟ್ಲ: ಮಗುವಿನ ಚಿಕಿತ್ಸೆಗಾಗಿ ಕ್ಲಿನಿಕ್ ಗೆ ಹೋಗುವ ವೇಳೆ ಕಿಡಿಗೇಡಿಗಳು ದಂಪತಿ ಮೇಲೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ಕೋಲ್ನಾಡು ಗ್ರಾಮದ ಸದಾಶಿವ ದೇವಸ್ಥಾನದ ಬಳಿ ಜೂನ್ 25 ನೇ ಆದಿತ್ಯವಾರದಂದು ರಾತ್ರಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಪಾಲ್ತಾಜೆ ನಿವಾಸಿ ಜಯಂತ ಎಂಬವರು ತನ್ನ ಮಗುವಿನ ಚಿಕಿತ್ಸೆಗಾಗಿ ರಾತ್ರಿ ವೇಳೆ ಕ್ಲಿನಿಕ್ ಗೆ ತನ್ನ ಸ್ನೇಹಿತನ ಆಟೋರಿಕ್ಷಾದಲ್ಲಿ ತನ್ನ ಹೆಂಡತಿ ಮಗುವಿನ ಜೊತೆ ಹೋಗುತ್ತಿದ್ದ ವೇಳೆ ಕೋಲ್ನಾಡು ಗ್ರಾಮದ ಸದಾಶಿವ ದೇವಸ್ಥಾನದ ಬಳಿ ಸಾಲೆತ್ತೂರು ವೈನ್ ಶಾಪ್ ಕಡೆಯಿಂದ ಎರಡು ಮೋಟಾರ್ ಸೈಕಲ್ ಗಳಲ್ಲಿ ಮುನ್ನ ಯಾನೆ ಸುದರ್ಶನ್,ಶರತ್,ಧನು ಮತ್ತು ಉದಯ ರವರು ಬಂದು ಆಟೋ ರಿಕ್ಷಾವನ್ನು ಅಡ್ಡಗಟ್ಟಿ ಸಾಲೆತ್ತೂರಿನ ಹಿಂದು ನಾಯಕತ್ವದ ವಿಚಾರದಲ್ಲಿ ಮಾತಿಗೆ ಮಾತು ಬೆಳದಾಗ ಮುನ್ನ ಯಾನೆ ಸುದರ್ಶನನು ಜಯಂತ ಪತ್ನಿಯ ಮೈ ಮೇಲೆ ಕೈ ಹಾಕಿ ದೂಡಿದಾಗ ಜಯಂತರವರು ತಡೆದಿರುತ್ತಾರೆ. ಈ ಸಂಧರ್ಭದಲ್ಲಿ ಶರತ್,ಧನು ಮತ್ತು ಉದಯ ರವರು ಜಯಂತರವರನ್ನು ಆಟೋ ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಶರತ್ ಎಂಬವನು ಅಲ್ಲೆ ಇದ್ದ ಮರದ ರೀಪಿನ ತುಂಡಿನಿಂದ ಜಯಂತರವರ ಮುಖಕ್ಕೆ ಹೊಡೆದುದಲ್ಲದೇ ಧನು ಮೂಗಿಗೆ ಕೈಯಿಂದ ಗುದ್ದಿದಾಗ ಮುನ್ನ ಮತ್ತು ಉದಯ ರವರು ಸೊಂಟಕ್ಕೆ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಯಂತರವರ ಪತ್ನಿ ಮತ್ತು ಆಟೋ ಚಾಲಕ ಶಿವರಾಮ್ ರವರು ಹಲ್ಲೆಯನ್ನು ತಡೆಯಲು ಬಂದಾಗ ಮುನ್ನ ಯಾನೆ ಸುದರ್ಶನ ಎಂಬವನು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುರುತ್ತಾನೆ. ಈ ಬಗ್ಗೆ ಜಯಂತರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ಕಲಂ 341, 354, 324, 323, 504, 506 ಹಾಗೂ 34 ಐಪಿಸಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!