Thursday, September 3, 2026
spot_imgspot_img
spot_imgspot_img

ವಿಷಮಿಶ್ರಿತ ಮದ್ಯ ದುರಂತ: 12 ಸಾವು, ಎಂಟು ಆರೋಪಿಗಳ ಬಂಧನ

- Advertisement -
- Advertisement -

ಪುಣೆ: ಮಹಾರಾಷ್ಟ್ರದ ಪುಣೆ ಹಾಗೂ ಪಿಂಪ್ರಿ ಚಿಂಚವಾಡ್ ಪ್ರದೇಶಗಳಲ್ಲಿ ವಿಷಮಿಶ್ರಿತ ಮದ್ಯ ಸೇವನೆಯಿಂದ ಕನಿಷ್ಠ 12 ಮಂದಿ ಮೃತಪಟ್ಟಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವಿಷಮಿಶ್ರಿತ ಮದ್ಯ ಪೂರೈಕೆ ಜಾಲದ ಪ್ರಮುಖ ಸೂತ್ರಧಾರ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಪಿಂಪ್ರಿ ಚಿಂಚವಾಡ್‌ನ ಫುಗೇವಾಡಿ ಪ್ರದೇಶದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಪುಣೆಯ ಹಡಪಸರ್‌ನ ಪಂಧರೆ ಮಾಲಾ ಭಾಗದಲ್ಲಿ ಐವರು ಶಂಕಿತ ವಿಷಮಿಶ್ರಿತ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಮೂವರು ಅಸ್ವಸ್ಥರು ಪಿಂಪ್ರಿ ಚಿಂಚವಾಡ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ.ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ Devendra Fadnavis, ವಿಷಮಿಶ್ರಿತ ಮದ್ಯ ಪೂರೈಕೆ ಜಾಲವನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿಯ ಬಂಧನ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.“ಪ್ರಕರಣದ ಕುರಿತು ತನಿಖೆ ಆರಂಭಿಸಲಾಗಿದೆ. ಮೃತ್ಯುವಿನ ನಿಖರ ಕಾರಣ ತಿಳಿಯಲು ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ” ಎಂದು ಪಿಂಪ್ರಿ ಚಿಂಚವಾಡ್ ಪೊಲೀಸ್ ಉಪ ಆಯುಕ್ತ ಸಂದೀಪ್ ಅಟೋಲ್ ಮಾಹಿತಿ ನೀಡಿದ್ದಾರೆ.

ಇದೇ ವೇಳೆ, “ಎರಡೂ ಪ್ರದೇಶಗಳಿಗೆ ವಿಷಪೂರಿತ ಮದ್ಯ ಪೂರೈಸಿದ್ದ ಯೋಗೇಶ್ ವಾಂಖೆಡೆ ಎಂಬಾತನನ್ನು ಬಂಧಿಸಿ ಪಿಂಪ್ರಿ ಚಿಂಚವಾಡ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ” ಎಂದು ಅಬಕಾರಿ ಆಯುಕ್ತ ಅತುಲ್ ಕನಾಡೆ ತಿಳಿಸಿದ್ದಾರೆ.ನಕಲಿ ಮದ್ಯ ತಯಾರಿಕಾ ಕೇಂದ್ರ ಧ್ವಂಸಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಎನ್‌ಸಿಪಿ (ಶರದ್ ಬಣ) ಶಾಸಕ Rohit Pawar ಹಾಗೂ ಪಕ್ಷದ ಕಾರ್ಯಕರ್ತರು ಹಡಪಸರ್ ಪ್ರದೇಶದಲ್ಲಿದ್ದ ರಹಸ್ಯ ನಕಲಿ ಮದ್ಯ ತಯಾರಿಕಾ ಕೇಂದ್ರವನ್ನು ಧ್ವಂಸಗೊಳಿಸಿದ್ದಾರೆ.

ಇದು ಅತ್ಯಂತ ಭಯಾನಕ ಘಟನೆ. ಗೃಹ ಇಲಾಖೆಯ ಅನಿಯಂತ್ರಿತ ಹಾಗೂ ಭ್ರಷ್ಟ ಕಾರ್ಯವೈಖರಿಯನ್ನು ಈ ದುರಂತ ಬಹಿರಂಗಪಡಿಸಿದೆ” ಎಂದು ರೋಹಿತ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.“ರಾಜ್ಯ ಸರ್ಕಾರ ತಾಂತ್ರಿಕವಾಗಿ ಮಾತ್ರ ಅಧಿಕಾರದಲ್ಲಿದ್ದು, ಜನರ ವಿಶ್ವಾಸ ಕಳೆದುಕೊಂಡಿದೆ” ಎಂದು ಅವರು ಟೀಕಿಸಿದ್ದಾರೆ.

- Advertisement -

Related news

error: Content is protected !!