Sunday, June 29, 2025
spot_imgspot_img
spot_imgspot_img

ಕಡಬ: ಹೃದಯಾಘಾತದಿಂದ ಯುವಕ ಮೃತ್ಯು..!

- Advertisement -
- Advertisement -

ಕಡಬ: ತೀವ್ರ ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ಪಂಜ ಸಮೀಪದ ಕರಿಕ್ಕಳದಲ್ಲಿ ನಡೆದಿದೆ.

ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ, ಪಂಜದ ಶಿವಕೃಪಾ ಮೋಟಾರ್ಸ್ ನ ಮೆಕಾನಿಕ್ ಭಾಸ್ಕರ ಗೌಡ ಮೃತ ಪಟ್ಟ ಯುವಕ. ಅವರು ಜೂ.25 ರಾತ್ರಿ 10 ಗಂಟೆಗೆ ವೇಳೆಗೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಪಂಜದಲ್ಲಿ ಅವರು ಸುಮಾರು 20 ವರುಷಗಳಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಾಯಿ ಲಕ್ಷ್ಮೀ, ಸಹೋದರ ಸುರೇಶ, ಸಹೋದರಿಯರಾದ ವೀಣಾ ಗೋಪಾಲಕೃಷ್ಣ ಎಳುವೆ ಕಾಣಿಯೂರು, ರಾಜೀವಿ ಬಾಲಕೃಷ್ಣ ಎಣ್ಮೂರು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!