Sunday, June 29, 2025
spot_imgspot_img
spot_imgspot_img

ಬೈಕ್-ಬಸ್ ನಡುವೆ ಅಪಘಾತ; ಬೈಕ್ ಸವಾರಿಬ್ಬರು ಸಾವು..!

- Advertisement -
- Advertisement -

ಬೈಕ್ ಹಾಗೂ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರಿಬ್ಬರು ಮೃತಪಟ್ಟ ದಾರುಣ ಘಟನೆ ಕಾರವಾರಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಶಿಂಗ್ನಳ್ಳಿ ಸಮೀಪ ನಡೆದಿದೆ.

ಮೃತಪಟ್ಟವರನ್ನು ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ(38) ಮತ್ತು ಹುಡೆ ಗ್ರಾಮದ ಜಾಫರಸಾಬ ದೇವಿಹೋಸೂರ(32) ಎಂದು ಗುರುತಿಸಲಾಗಿದೆ.

ಮುಂಡಗೋಡಿನಿಂದ ಹಾನಗಲ್‌ಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪಾಳಾದಿಂದ ಮುಂಡಗೋಡನತ್ತ ಬರುತ್ತಿದ್ದ ಬೈಕ್ ನಡುವೆ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ತಾಲೂಕಿನ ಶಿಂಗ್ನಳ್ಳಿ ಜಲಾಶಯ ಕ್ರಾಸ್ ಸನಿಹ ಡಿಕ್ಕಿ ಸಂಭವಿಸಿತ್ತು. ಈ ಅಪಘಾತದಲ್ಲಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!