Friday, June 27, 2025
spot_imgspot_img
spot_imgspot_img

ನಾಪತ್ತೆಯಾಗಿದ್ದ ಬಾಲಕ ಕೆರೆಯಲ್ಲಿ ಶವವಾಗಿ ಪತ್ತೆ

- Advertisement -
- Advertisement -

ಪಾಲಕ್ಕಾಡ್: ನಾಪತ್ತೆಯಾಗಿದ್ದ ಬಾಲಕನೋರ್ವ ಪಟ್ಟಾಂಬಿಯ ಕಪೂರ್ ಕುಮಾರನೆಲ್ಲೂರ್ ಎಂಬಲ್ಲಿನ ಕೊಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.


ಬಾಲಕನನ್ನು ಕುಮಾರನೆಲ್ಲೂರು ಅರಮನೆ ಬಳಿ ಅನ್ವರ್ ಮತ್ತು ರಜಿಯಾ ದಂಪತಿಯ ಪುತ್ರ ಅಲ್ ಅಮೀನ್ (13) ಎಂದು ಗುರುತಿಸಲಾಗಿದೆ.

ಗುರುವಾರ (11.04.2024) ಸಂಜೆ 4 ಗಂಟೆಯಿಂದ ಕಾಣೆಯಾಗಿದ್ದ ಅಮೀನ್‌ನನ್ನು ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ನಂತರ ತ್ರಿತಾಳ ಠಾಣೆಗೆ ಮಾಹಿತಿ ನೀಡಲಾಯಿತು.

ಸ್ಥಳೀಯರು ನಡೆಸಿದ ಹುಡುಕಾಟದಲ್ಲಿ ವೆಳ್ಳಲೂರಿನ ವ್ಯಕ್ತಿಯ ಕೆರೆಯಲ್ಲಿನ ಕಲ್ಲಿನ ಚಪ್ಪಡಿಯಲ್ಲಿ ಅಮೀನ್‌ ಶೂ ಮತ್ತು ಬಟ್ಟೆ ಪತ್ತೆಯಾಗಿದೆ. ಪಟ್ಟಾಂಬಿಯಿಂದ ಬಂದ ಅಗ್ನಿಶಾಮಕ ರಕ್ಷಣಾ ತಂಡ ನಡೆಸಿದ ಶೋಧದಲ್ಲಿ ರಾತ್ರಿ 11 ಗಂಟೆಗೆ ಶವವನ್ನು ಕೊಳದಿಂದ ಹೊರ ತೆಗೆಯಲಾಯಿತು.
ತ್ರಿಠಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಬಳಿಕ ಮೃತದೇಹವನ್ನು ಪಟ್ಟಾಂಬಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Related news

error: Content is protected !!