- Advertisement -
- Advertisement -




ಕಾಸರಗೋಡು: ಈರುಳ್ಳಿ ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ತಂಬಾಕು ಉತ್ಪನ್ನಗಳನ್ನು ಕುಂಬಳೆ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸುಮಾರು 30 ಲಕ್ಷ ರೂ.ಮೌಲ್ಯದ ತಂಬಾಕು ಉತ್ಪನ್ನ ಸಹಿತ ಲಾರಿ ಚಾಲಕ ಕೊಲ್ಲಂ ನ ಅನ್ವರ್ (43) ಎಂಬಾತನನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ
ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ತಂಬಾಕು ಉತ್ಪನ್ನ ಸಾಗಾಟ ಪತ್ತೆ ಯಾಗಿದೆ.
ಲಾರಿಯ ಹಿಂಬದಿಯಲ್ಲಿ ಈರುಳ್ಳಿ ತುಂಬಿದ ಗೋಣಿ ಚೀಲದ ಅಡಿಯಲ್ಲಿಟ್ಟು ತಂಬಾಕು ಉತ್ಪನ್ನ ಗಳನ್ನು ಸಾಗಿಸಲಾಗುತ್ತಿತ್ತು. ಕರ್ನಾಟಕದಿಂದ ತಿರುವನಂತಪುರಕ್ಕೆ ತಂಬಾಕು ಉತ್ಪನ್ನಗಳನ್ನು ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.
- Advertisement -