

ಬಂಟ್ವಾಳ: ಮಹಿಳೆಯೋರ್ವರ ಮನೆಯ ಟೇರೀಸ್ ಬಾಗಿಲನ್ನು ಮುರಿದು ಯಾರೋ ಕಳ್ಳರೂ ಮನೆ ಒಳಗೆ ಒಳಪ್ರವೇಶಿಸಿ, ರೂಮ್ನಲ್ಲಿದ್ದ ಗಾಡ್ರೇಜ್ ಬಾಗಿಲನ್ನು ಯಾವುದು ಆಯುಧದಿಂದ ಮೀಟಿ, ಅದರೊಳಗಿದ್ದ 3,20,000 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿ ನಡೆದಿದೆ.
ಜೀನತ್ ಎಂಬವರ ದೂರಿನಂತೆ ರಾತ್ರಿಯಿಂದ ಬೆಳಿಗ್ಗಿನ ಮಧ್ಯದ ಅವಧಿಯಲ್ಲಿ, ಬಂಟ್ವಾಳ ತಾಲೂಕು ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿರುವ ತನ್ನ ಮನೆಯ ಟೇರೀಸ್ ಬಾಗಿಲನ್ನು ಯಾರೋ ಕಳ್ಳರೂ ಮುರಿದು, ಮನೆಯ ಒಳಗೆ ಒಳಪ್ರವೇಶಿಸಿ, ರೂಮನಲ್ಲಿದ್ದ ಗಾಡ್ರೇಜ್ ನ ಬಾಗಿಲನ್ನು ಯಾವುದು ಆಯುಧದಿಂದ ಮೀಟಿ, ಅದರೊಳಗಿದ್ದ, ಒಟ್ಟು 52 ಗ್ರಾಂ ಚಿನ್ನದ ಆಭರಣಗಳನ್ನು ಹಾಗೂ ವಿದೇಶದಿಂದ ಜೀನತ್ ಎಂಬವರ ಮಗ ತಂದು ಗಾಡ್ರೆಜ್ನಲ್ಲಿಟ್ಟಿದ್ದ 5000/- ಸೌದಿಯ ರಿಯಲ್ಸ್ ಕರೆನ್ಸಿ (ಭಾರತದ ಮೌಲ್ಯ 1,15,000/-)ಯನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ
ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 3,20,000/- ರೂ ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 112/2024 ಕಲಂ:454,457,380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.