Friday, May 3, 2024
spot_imgspot_img
spot_imgspot_img

ರೌಡಿಶೀಟರ್ ಸುರೇಂದ್ರ ಬಂಟ್ವಾಳ ಕೊಲೆ ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಬಂಟ್ವಾಳ (ಅ.25): ರೌಡಿಶೀಟರ್ ಸುರೇಂದ್ರ ಬಂಟ್ವಾಳನನ್ನು ತನ್ನ ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಆ.20 ರಾತ್ರಿ ಚೂರಿಯಿಂದ ಇರಿದು ಹತ್ಯೆ ಮಾಡಿ ಹೋಗಿದ್ದ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರ ಬಂಟ್ವಾಳ ಅಪ್ತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಕಿನ್ನಿಗೋಳಿ ನಿವಾಸಿ ಗಿರಿಯನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ ಮತ್ತು ತಂಡ ಕಾರನ್ನು ಅಡ್ಡಹಾಕಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

ಅ.20 ರಂದು ರಾತ್ರಿ ಇಬ್ಬರು ದುಷ್ಕರ್ಮಿಗಳು ಬಿ.ಸಿ.ರೋಡಿನ ಪ್ಲ್ಯಾಟ್ ಗೆ ಬಂದು ಹೋಗಿದ್ದು ನಂತರ ಆ.21 ರಂದು ಸುರೇಂದ್ರ ಬಂಟ್ವಾಳ ಮೊಬೈಲ್ ಗೆ ಸ್ನೇಹಿತರು ಕರೆ ಮಾಡಿದಾಗ ಯಾವುದೇ ಉತ್ತರ ಸಿಕ್ಕದ ಕಾರಣ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಮಧ್ಯಾಹ್ನ ಪ್ಲ್ಯಾಟ್ ಪರಿಶೀಲನೆ ನಡೆಸಿದಾಗ ರಕ್ತದ ದುರ್ವಾಸನೆ ಬರುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿ ಬಾಗಿಲು ಒಡೆದು ಒಳಪ್ರವೇಶ ಮಾಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.‌

ಈ ಬಗ್ಗೆ ಸಿಸಿಕ್ಯಾಮರ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ಬಂದು ಹೋದ ಬಗ್ಗೆ ಸಾಕ್ಷಿ ದೊರೆತ್ತಿದ್ದು ನಂತರ ತನ್ನ ಅಪ್ತ ಸತೀಶ್ ಮೇಲೆ ಅನುಮಾನ ಪೊಲೀಸರಿಗೆ ಬಂದಿತ್ತು ಆತನ ಮೊಬೈಲ್ ಕೂಡ ಸ್ವೀಚ್ ಆಫ್ ಅಗಿತ್ತು.‌ ಈ ಪ್ರಕರಣದ ಬಳಿಕ ಸ್ವತಃ ಆರೋಪಿ ಸತೀಶ್ ಆಡಿಯೋ ಒಂದನ್ನು ಮಾಡಿ ಕೊಲೆ ನಾನೇ ಮಾಡಿದ್ದು ಇದು ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಎಂದು ಪೊಲೀಸರಿಗೆ ವೈರಲ್ ಮಾಡಿದ್ದ ನಾಲ್ಕು ದಿನದ ಬಳಿಕ ಕೊಲೆ ಮಾಡಿದ ಆರೋಪಿಗಳಿಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೊಲೆ ಪ್ರಕರಣದ ಬಗ್ಗೆ ತನಿಖೆ ಮಾಡಿದ ಬಳಿಕ ಕೊಲೆಯ ಸ್ಪಷ್ಟ ಚಿತ್ರಣ ಹೊರಬಿಳಲಿದೆ.

- Advertisement -

Related news

error: Content is protected !!