

ವಿಟ್ಲ : ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ, ಚಂದಳಿಕೆಯಲ್ಲಿ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇಲ್ಲಿಯ ಪಟಾಲಂ ನಾಯಕರ ತರಬೇತಿ ಶಿಬಿರವು ದಿನಾಂಕ -08-08-2024ರ ಗುರುವಾರದಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಪಡಿಯರ್ ರವರು ವಹಿಸಿಕೊಂಡರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ಯಾವರ್ಧಕ ಸಂಘ ಚಂದಳಿಕೆ ಇದರ ಅಧ್ಯಕ್ಷರಾದ ಭವಾನಿ ರೈ ಕೊಲ್ಯ ಇವರ ನೆರವೇರಿಸುತ್ತಾ ಸ್ಕೌಟ್ ಅಂಡ್ ಗೈಡ್ಸ್ ನ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ, ಮೂಲಕ ಸಾಮಾಜಿಕ ಮೌಲ್ಯ,ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯಿತಿನ ಕೌನ್ಸಿಲರ್ ರಕ್ಷಿತಾ, ಶಾಲೆಯ ಎಸ್ ಡಿ.ಎಂ. ಸಿ. ಅಧ್ಯಕ್ಷೆ ಸುಮತಿ, ಎಸ್ ಡಿ ಎಂ ಸಿ ಸದಸ್ಯೆ ತೆರೆಸಾ ಡಿಸೋಜ ಭಾಗವಹಿಸಿದರು.
ಈ ಶಿಬಿರದಲ್ಲಿ ಒಟ್ಟು108 ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಹಾಗೂ ವಿಟ್ಲ ಸ್ಥಳೀಯ ಸಂಸ್ಥೆಯ ತರಬೇತಿ ಹೊಂದಿದ ಒಟ್ಟು 13 ಮಂದಿ ಶಿಕ್ಷಕರು ಭಾಗವಹಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರತೀಪ್ ಸ್ವಾಗತಿಸಿದರು. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸ್ಥಳೀಯ ಸಂಸ್ಥೆ ಇದರ ಕೋಶಾಧಿಕಾರಿಗಳಾಗಿರುವ ವಿಶ್ವನಾಥ್ ಗೌಡ ಇವರು ಧನ್ಯವಾದಗೈದರು. ಸ್ಥಳೀಯ ಸಂಸ್ಥೆಯ ಜಿಲ್ಲಾ ಪ್ರತಿನಿಧಿಗಳಾದ ನಾರಾಯಣ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
