- Advertisement -
- Advertisement -



ವಿಟ್ಲ : ಜೆಸಿಐ ವಿಟ್ಲ ವತಿಯಿಂದ “ಶ್ರಾವಣ “ತರಬೇತಿ ಸಪ್ತಾಹದ ಪ್ರಥಮ ದಿನದ ಕಾರ್ಯಕ್ರಮವು ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಸಿಸ್ಟರ್ ಮರೀನಾ ಲಸ್ರದೋ ಅವರ ದಿವ್ಯ ಹಸ್ತದಲ್ಲಿ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು JFF. ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಿಕೊಂಡು, ಮುಖ್ಯ ಅತಿಥಿಗಳಾಗಿ ಶಾಲಾ ಪ್ರಾಂಶುಪಾಲರು ಫಾದರ್ ಸುನಿಲ್ ಪ್ರವೀಣ್ ಪಿಂಟೋ, ಉಪಪ್ರಾಂಶುಪಾಲರಾದ ಸಚಿನ್ ಶುಭಾಶಯಗಳನ್ನು ಕೋರಿದರು.


ತರಬೇತುದಾರರಾಗಿ ಜೆಸಿಐ ಭಾರತದ ರಾಷ್ಟ್ರೀಯ ತರಬೇತುದಾರರಾದ ಜೇಸಿ. ಸೇನೆಟರ್. ಕೃಷ್ಣ ಮೋಹನ್. ಪಿ. ಎಸ್ ಹಾಗೂ ಕಾರ್ಯದರ್ಶಿ ಮುರಳಿಪ್ರಸಾದ್, ಕೋಶಾಧಿಕಾರಿ ಲುವಿಸ್ ಮಸ್ಕ್ಯಾರೆನ್ಹಸ್ ಹಾಗೂ ರಾಧಾ ಕೃಷ್ಣ ಎರುಂಬು ಉಪಸ್ಥಿತರಿದ್ದರು.


- Advertisement -