



ಬೆಳ್ಳಾರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ಪ್ರವೇಶಿಸಿ ಗೋಡ್ರೆಜಿನ ಬಾಗಿಲು ಮುರಿದು ನಗ-ನಗದು ಕಳವುಗೈದ ಘಟನೆ ಸವಣೂರು ಗ್ರಾಮ ಕಡಬ ಎಂಬಲ್ಲಿ ನಡೆದಿದೆ.
ಸವಣೂರು ಗ್ರಾಮ ಕಡಬ ಸಲೀಂ ಕೆ ಎಂಬವರ ದೂರಿನಂತೆ ಇವರು ಅ.11 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ಅವರ ಪತ್ನಿ ಹಾಗೂ ಮಕ್ಕಳೊಂದಿಗೆ ಟ್ರಿಪ್ಗೆ ಹೋಗಿದ್ದು, ವಾಪಸ್ಸು ಟ್ರಿಪ್ ಮುಗಿಸಿಕೊಂಡು ಅ.13 ರಂದು ಮದ್ಯರಾತ್ರಿ ಮನೆಗೆ ಬಂದಾಗ ಮನೆಯ ಎದುರುಗಡೆಯ ಬಾಗಿಲಿಗೆ ಅಳವಡಿಸಿದ್ದ ಬೀಗ ಮುರಿದಿರುವುದು ಕಂಡುಬಂದಿರುತ್ತದೆ.
ಈ ವೇಳೆ ಸಲೀಂರವರು ಎದುರಿನ ಬಾಗಿಲಿನಿಂದಾಗಿ ಒಳಪ್ರವೇಶಿಸಿ ಮಲಗುವ ಕೋಣೆಗಳನ್ನು ನೋಡಿದಾಗ, ಅಲ್ಲಿದ್ದ ಗೋಡ್ರೆಜಿನ ಬಾಗಿಲು ಮುರಿದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ನೆಲದಲ್ಲಿ ಹರಡಿದ್ದು, ಗೋಡ್ರೆಜಿನಲ್ಲಿದ್ದ 53 ಗ್ರಾಂ ಚಿನ್ನದ ಆಭರಣಗಳು ( ಅಂದಾಜು ಮೌಲ್ಯ 2,12,000), ಸಾಕ್ಸಿಂಗ್ ಕಂಪೆನಿಯ ಟಾಬ್ -1 ( ಅಂದಾ ಜು ಮೌಲ್ಯ ರೂ 4000) TISSOT ವಾಚ್ -1 (ಅಂದಾಜು ಮೌಲ್ಯ ರೂ 15000) ಹಾಗೂ ನಗದು ಸುಮಾರು 30,000 ರೂಪಾಯಿಗಳನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು, ಮನೆ ಬೀಗ ಮುರಿದು, ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ . 80/2024 ಕಲಂ 331(3),331(4),305ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.