



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಯೋಜನೆಯಿಂದ ನೀಡಲಾಗುವ ಸೌಲಭ್ಯಗಳ ಕುರಿತು ಪತ್ರಿಕಾಗೋಷ್ಠಿ ವಿಟ್ಲ ಯೋಜನೆಯ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯಲ್ಲಿ ವಿಟ್ಲ ತಾಲೂಕು ಯೋಜನಾಧಿಕಾ ರಮೇಶ್ ಮಾತನಾಡಿ ’ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ನಿಂದ ಸಮುದಾಯಭಿವೃದ್ಧಿ ಯೋಜನೆಯಿಂದ ದೇವಸ್ಥಾನಗಳಿಗೆ , ಶಾಲಾ ಕೊಠಡಿ ಹಾಗೂ ಇತರೆ ಶಾಲಾಭಿವೃದ್ಧಿಗಳಿಗಾಗಿ, ಹಿಂದೂ ರುದ್ರ ಭೂಮಿ, ಹಾಲು ಉತ್ಪಾದಕರ ಘಟಕಕ್ಕೆ, ಸಮುದಾಯ ಭವನ, ಭಜನಾ ಮಂದಿರ, ಸಾರ್ವಜನಿಕ ಶೌಚಾಲಯ, ಜ್ಞಾನದೀಪ ಶಿಕ್ಷಕರಿಗೆ ವೇತನ, ಹೀಗೆ ಹಲವು ಗ್ರಾಮಾಭಿವೃದ್ಧಿ ಯೋಜನೆಗಳಿಗೆ ರೂ. 13,94,000/- ರಷ್ಟು ಯೋಜನೆಯಿಂದ ಅನುದಾನ ನೀಡಲಾಗಿದೆ. ಸುಜ್ಞಾನ ನಿಧಿ ಯೋಜನೆಯಡಿಯಲ್ಲಿ 658 ವಿದ್ಯಾರ್ಥಿಗಳಿಗೆ ರೂ. 61.76/- ರಷ್ಟು ವಿದ್ಯಾರ್ಥಿವೇತನ ನೀಡಲಾಗಿದೆ. ಜನಮಂಗಲ ಯೋಜನೆ, ನಮ್ಮೂರ ಕೆರೆ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಕ್ರಿಟಿಕಲ್ ಇಲ್ನೆಸ್ ಫಂಡ್ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಅನಾರೋಗ್ಯ ಪೀಡಿತರಿಗೆ ಸಹಾಯಧನ ನೀಡಲಾಗಿದೆ. ವಾತ್ಸಲ್ಯ ಕಾರ್ಯಕ್ರಮ ಯೋಜನೆಯಡಿ ವಾತ್ಸಲ್ಯ ಮನೆ ರಿಪೇರಿ, ವಾತ್ಸಲ್ಯ ಕಿಟ್ ವಿತರಣೆ ಹಾಗೂ ಮಾಶಾಸನ ವಿತರಣೆಗಾಗಿ ಇದುವರೆಗೆ ಒಟ್ಟು 53,31,000/- ಸಹಾಯಧನ ನೀಡಲಾಗಿದೆ. , ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಇದುವರೆಗೆ 29 ಮದ್ಯವರ್ಜನ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಮದ್ಯವರ್ಜನ ಶಿಬಿರದಲ್ಲಿ ಒಟ್ಟು 1936 ಶಿಬಿರಾರ್ಥಿಗಳು ಪಾಲ್ಗೊಂಡು ತನ್ನ ಸುಖೀ ಜೀವನವನ್ನು ಸಾಗಿಸುತ್ತಿದ್ದಾರೆ. ಹಾಗೆಯೇ 8 ಶೌರ್ಯ ವಿಪತ್ತು ಘಟಕಗಳು ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿದ್ದು, 146 ಸ್ವಯಂ ಸೇವಕರು ಈ ತಂಡದಲ್ಲಿ ಹಲವು ಶ್ರಮದಾನ ಕಾರ್ಯ ಸೇರಿದಂತೆ ತುರ್ತು ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಈ ತಂಡದಿಂದ 173 ಸೇವಾಕಾರ್ಯಗಳು ನಡೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು ಪತ್ರಿಕಾ ಮಾಧ್ಯಮ ವರದಿಗಾರರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆ ನೀಡಿದರು. ಪತ್ರಿಕಾ ಗೋಷ್ಠಿಯಲ್ಲಿ ಯೋಜನೆಯ ಸಿಬ್ಬಂದಿಗಳಾದ ಜಗದೀಶ್ ಯೋಜನೆಯ ವಲಯ ಮೇಲ್ವಿಚಾರಕರು, ಯೋಜನೆಯ ಶೌರ್ಯ ತಂಡದ ಸದಸ್ಯ ಚಿನ್ನಾ ಕಲ್ಲಡ್ಕ ಉಪಸ್ಥಿತರಿದ್ದರು.