ಅಧ್ಯಕ್ಷರಾಗಿ ರೇಷ್ಮಾನೆಕ್ಕರೆ, ಕಾರ್ಯದರ್ಶಿಯಾಗಿ ಸೌಮ್ಯ ಮೂವಳ


ಕಬಕ: ಶ್ರೀ ಮಹಾದೇವಿ ಮಹಿಳಾ ಮಂಡಳಿ ಕಬಕ ಇದರ 13ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಸಭೆಯು ಕಬಕ ಶ್ರೀ ಮಹದೇವಿ ಕಲಾಮಂದಿರದಲ್ಲಿ ಶ್ರೀ ಮಹಾದೇವಿ ದೇವಸ್ಥಾನದ ಅಧ್ಯಕ್ಷರು ವಿ. ಚಂದ್ರಶೇಖರ್ ನಾಯ್ಕ್ ಹಾಗೂ ಕಾರ್ಯದರ್ಶಿ ಜತ್ತಪ್ಪ ಗೌಡ ಅಡ್ಯಾಲು ಇವರುಗಳ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರು ವಿ. ಚಂದ್ರಶೇಖರ್ ನಾಯ್ಕ್ ಮಾತನಾಡಿ ಹೊರಗಿನವರಿಗೆ ತಮ್ಮ ಮಠ, ಮಂದಿರ, ದೇವಸ್ಥಾನಗಳನ್ನು ನೋಡಿದಾಗ ಸಂಘಟನೆ ಹೇಗಿದೆ ಎಂಬುದು ಜನರಿಗೆ ಅರ್ಥ ಆಗುತ್ತದೆ. ನಮ್ಮ ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಸದಸ್ಯರು ಸಕ್ರಿಯವಾಗಿ ಭಾಗಹಿಸುವುದು ತಮಗೆ ಸಂತೋಷತಂದಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿದರು. ಬಳಿಕ ಜತ್ತಪ್ಪ ಗೌಡ ಮಾತನಾಡಿ ಸಂಘಟನೆ ಬಲಿಷ್ಠ ಆಗಬೇಕಾದರೆ ಮಹಿಳೆಯರ ಸಂಖ್ಯೆಯನ್ನು ಜಾಸ್ತಿ ಆಗುವ ಹಾಗೆ ಮಾಡಬೇಕು ಕಬಕದಲ್ಲಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಸಾಮಾಜಿಕ, ಸಂಸೃತಿಕ, ಕ್ರೀಡೆಯಲ್ಲಿ ನಮ್ಮ ಸಂಘದ ಹೆಸರು ದಕ್ಷಿಣ ಕನ್ನಡಲ್ಲಿಯೇ ಹೆಸರುವಾಸಿಯಾಗಿದೆ ಇನ್ನಷ್ಟು ಮಹಿಳೆಯರನ್ನು ಮಹಿಳಾ ಮಂಡಲಕ್ಕೆ ಸೇರಿಸಿ ಕರ್ನಾಟಕ್ಕದಲ್ಲಿಯೇ ಹೆಸರನ್ನು ಪಡೆಯಲಿ ಎಂದು ಶುಭನುಡಿದರು.ನಿಕಟಪೂರ್ವ ಅಧ್ಯಕ್ಷರು ಮಾತನಾಡಿ ನಮ್ಮ ಅವಧಿಯಲ್ಲಿ ನೀಡಿದಂತ ಸಹಕಾರವನ್ನು ಮುಂದಿನ ಅವಧಿಯಲ್ಲಿಯು ನೀಡಿ ಸಹಕರಿಸುವ ಎಂದು ಹೇಳಿ ನೂತನ ಅಧ್ಯಕ್ಷ/ಕಾರ್ಯದರ್ಶಿಗಳಿಗೆ ಶುಭಾಶಯ ಸಲ್ಲಿಸಿದರು.

ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಡ್ಯಾಲು ಮಾತನಾಡಿ ಯುವಕ ಮಂಡಲದ ಎಲ್ಲಾ ಕೆಲಸಗಲ್ಲಿಯೂ ಮಹಿಳಾ ಮಂಡಲದ ಸದಸ್ಯರ ಪರಿಶ್ರಮ ಇದ್ದೆ ಇರುತ್ತದೆ ಮಹಿಳಾ ಮಂಡಲಕ್ಕೆ ಯುವಕ ಮಂಡಲದ ಸಹಕಾರವನ್ನು ಇನ್ನು ಮುಂದೆಯೂ ನೀಡುತೇವೆ ಎಂದು ಭರವಸೆ ನೀಡಿದರು. ನೂತನ ಅಧ್ಯಕ್ಷರಾಗಿ ಆಯ್ಕೆ ಆದ ರೇಷ್ಮಾ ನೆಕ್ಕರೆ ಇವರು ಮಾತನಾಡಿ ಸಂಘಟನೆ ಬಲಿಷ್ಠ ಆಗಬೇಕಾದರೆ ಮಹಿಳೆಯರ ಸಂಖ್ಯೆ ಜಾಸ್ತಿ ಮಾಡುವಂತದ್ದು ನಮ್ಮ ಕರ್ತವ್ಯ, ಹೆಣ್ಣು ಮಕ್ಕಳು ರಸ್ತೆಯಲ್ಲಿ ತಲೆ ಎತ್ತಿ ನಡೀಬೇಕಾದರೆ ಪ್ರತಿ ಗ್ರಾಮದಲ್ಲಿಯು ಮಹಿಳೆಯರ ಸಂಘಟನೆ ಆಗಬೇಕು. ಒಂದು ವಾರದಲ್ಲಿ ಅಥವಾ ತಿಂಗಲ್ಲಿ ಒಂದು ಬಾರಿ ಆದರೂ ನಾವು ಸಮಾಜಕ್ಕೆ ನಮ್ಮಿಂದ ಆಗುವ ಸಮಯವನ್ನು ಕೊಡುವಂತ ಪ್ರಯತ್ನ ನಮ್ಮಿದ ಆಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡ್ಯಾಲಯ ಸೇವಾ ಸಮಿತಿಯ ಉಪಾಧ್ಯಕ್ಷ ರವೀಂದ್ರ ಕಲ್ಲಂದಡ್ಕ, ಉತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ ಜಯರಾಮ್ ನೆಕ್ಕರೆ, ಅಧ್ಯಕ್ಷ ಧರ್ನಪ್ಪ ಗೌಡ ಸೀಗೆತ್ತಾಡಿ, ಮಾಜಿ ಅಧ್ಯಕ್ಷ ಲೋಕೇಶ್ ಬಾಕಿಮಾರ್, ಯುವಕ ಮಂಡಲದ ಕಾರ್ಯದರ್ಶಿ ಯತೀಶ್ ಪದ್ನಡ್ಕ, ಯುವಕ ಮಂಡಲದ ಸದಸ್ಯರು ಭವಿತ್ ಕರ್ಗಲ್ಲು, ರಾಜ ವಿದ್ಯಾಪುರ, ಕಿರಣ್ ಅಡ್ಯಾಲು, ಮಹಿಳಾ ಮಂಡಲದ ಸದಸ್ಯರು ಸೌಮ್ಯ ಕಬಕ, ಗೀತಾ ಮೂವಳ, ಗೀತಾ ಅಡ್ಯಾಲು, ಶಾಂತಮ್ಮ ಅಡ್ಯಾಲು, ಪೂರ್ಣಿಮಾ ಕಬಕ,ಪುಷ್ಪ ಕಬಕ ಬೈಲು ಉಪಸ್ಥಿತರಿದ್ದರು.
ವಾಣಿ ಕಬಕ ಬೈಲು ಕಾರ್ಯಕ್ರಮ ನಿರೂಪಿಸಿ, ಗೀತಾ ಕಳಮೆಮಜಲು ಸ್ವಾಗತಿಸಿದರು, ಸೌಮ್ಯ ಮೂವಳ ಧನ್ಯವಾದ ಸಮರ್ಪಿಸಿದರು.