ಪಂಚಾಯತ್ ಅಧ್ಯಕ್ಷರ/ ಸಂಬಂಧಪಟ್ಟ ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಸ್ಥಳೀಯರಿಂದ ಆಕ್ರೋಶ




ಕಡಂಬು: ಅಪಾಯಕಾರಿ ರಸ್ತೆ ತಿರುವಿನಲ್ಲಿ ನಳ್ಳಿನೀರು ಪೈಪ್ ದುರಸ್ಥಿ ಕಾಮಗಾರಿಗಾಗಿ ತೋಡಿದ ಬೃಹತ್ ಗುಂಡಿಯೊಂದು ವಾಹನ ಚಾಲಕರ ಮತ್ತು ಪಾದಾಚಾರಿಗಳ ಪ್ರಾಣಕ್ಕೆ ಮೃತ್ಯುಕೂಪದಂತೆ ಕಾಡುತ್ತಿರುವ ಬಗ್ಗೆ ವಿಟ್ಲ ಸಮೀಪದ ಕೊಡಂಗಾಯಿಯಲ್ಲಿ ವರದಿಯಾಗಿದೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂಬು ಸೇತುವೆ ಬಳಿ ರಸ್ತೆ ತಿರುವುವಿನಲ್ಲಿ ನಳ್ಳಿನೀರಿಗಾಗಿ ಅಳವಡಿಸಿದ ಪೈಪ್ ಕೆಟ್ಟುಹೋಗಿದ್ದು ಪಂಚಾಯತ್ ವ್ಯಾಪ್ತಿಯಿಂದ ನಡೆದ ದುರಸ್ಥಿ ಕಾಮಗಾರಿ ವೇಳೆ ಬೃಹತ್ ಗುಂಡಿಯನ್ನು ತೋಡಲಾಗಿತ್ತು ಆದರೆ ಪಂಚಾಯತ್ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ತೆರದಿಟ್ಟ ಗುಂಡಿಯನ್ನು ಮುಚ್ಚಲಾಗಿಲ್ಲ ಇದರಿಂದ ಅಪಾಯಕಾರಿ ಬೃಹತ್ ರಸ್ತೆ ತಿರುವಿನಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯುಂಟಾಗಿದ್ದು ಈ ಗುಂಡಿ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿದೆ

ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ಅಧ್ಯಕ್ಷರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಮಾಹಿತಿ ನೀಡಿದ್ದಾರೆ ಆದರೆ ಈ ಬಗ್ಗೆ ಯಾವುದೇ ಪರಿಹಾರ ವ್ಯವಸ್ಥೆಯನ್ನು ಮಾಡಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
