- Advertisement -
- Advertisement -
ಕೊಚ್ಚಿ: ಮನೆಯಲ್ಲಿದ್ದ ನಾಯಿ ಮರಿಯನ್ನು ದೂರ ಬಿಟ್ಟು ಬರಲು ಅದನ್ನು ಕಾರಿಗೆ ಕಟ್ಟಿ ಹಾಕಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಘಟನೆ ಕೇರಳದ ಎರ್ನಾಕುಳಂನಲ್ಲಿ ನಡೆದಿದೆ.ಆರೋಪಿ ಯೂಸಫ್ ಎಂಬಾತನನ್ನು ಈ ಕಾರಣಕ್ಕಾಗಿ ಬಂಧಿಸಲಾಗಿದೆ.
ಯೂಸಫ್ ತನ್ನ ಕಾರಿಗೆ ನಾಯಿಮರಿಯನ್ನು ಕಟ್ಟಿ ಹಾಕಿ ರಸ್ತೆಯಲ್ಲಿ ವೇಗವಾಗಿ ಸಂಚರಿಸಿದ್ದಾನೆ. ಈ ದೃಶ್ಯ ಇದೀಗ ವೈರಲ್ ಆಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಾರಿಗೆ ಇಲಾಖೆ ಆರೋಪಿಯ ಲೈಸೆನ್ಸ್ ರದ್ದುಪಡಿಸಲು ನಿರ್ಧರಿಸಿದೆ. ಎರ್ನಾಕುಳಂ ಸಮೀಪದ ಪರವೂರ್ ಎಂಬಲ್ಲಿ ಈ ಘಟನೆ ನಡೆದಿದೆ. ಇದೀಗ ಆರೋಪಿ ಯೂಸಫ್ ನನ್ನು ಬಂಧಿಸಲಾಗಿದೆ.
- Advertisement -