- Advertisement -
- Advertisement -





ವಿಟ್ಲ, ಎ.20: ಸಾಲೆತ್ತೂರು ಸಿರಿ ವಿದ್ಯಾಲಯಕ್ಕೆ ಪಿ.ಎನ್.ಬಿ. ಮೆಟ್ ಲೈಫ್ ಕಂಪನಿಯ ಸಿ.ಎಸ್.ಆರ್. ನಿಧಿಯಿಂದ ಶಾಲಾ ಬಸ್ ಒದಗಿಸಲಾಯಿತು.

ಈ ಸಂದರ್ಭದಲ್ಲಿ ಪಿ.ಎನ್.ಬಿ. ಮೆಟ್ ಲೈಫ್ ಮಂಗಳೂರು ಪ್ರಾಂತ್ಯದ ಚೀಫ್ ಮೆನೇಜರ್ ಹಾಗೂ ಕ್ಲಸ್ಟರ್ ಹೆಡ್ ಲಕ್ಷ್ಮೀನಾರಾಯಣ ಪಿ.ಎಸ್., ಮಂಚಿ ಶಾಖೆಯ ಮೆನೇಜರ್ ಪ್ರವೀಣ ಗೌಡ ಹಾಗೂ ಚರಣ್ ಅವರು ಸಿರಿ ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ (ಇರಾಬಾಳಿಕೆ) ಅವರಿಗೆ ಬಸ್ ಹಾಗೂ ಅದರ ಕೀಗಳನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
- Advertisement -








