ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷರಾದ ಜೆಸಿಐ ಸೆನೆಟರ್ ಬಾಲಕೃಷ್ಣ ವಿಟ್ಲ ಇವರಿಗೆ "ಸಾಧನಾಶ್ರೀ ಪುರಸ್ಕಾರ" ನೀಡಿ ಗೌರವ




ಮಡಂತ್ಯಾರು: ಜೆಸಿಐ ಭಾರತ ವಲಯ 15ರ ಪ್ರತಿಷ್ಠಿತ ವ್ಯವಹಾರ ಹಾಗೂ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ಸಮ್ಮೇಳನ “ಮೃದಿನಿ -2026” ಜೆಸಿಐ ಮಡಂತ್ಯಾರು ಘಟಕದ ಆತಿಥ್ಯದಲ್ಲಿ ಕಲಾಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಯುವಜನರಲ್ಲಿ ನಾಯಕತ್ವ, ಉದ್ಯಮಶೀಲತೆ, ಸಮಾಜಮುಖಿ ಚಿಂತನೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜೆಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷರಾದ ಜೆಸಿಐ ಸೆನೆಟರ್ ಬಾಲಕೃಷ್ಣ ವಿಟ್ಲ ಇವರಿಗೆ ಜೆಸಿಐ ಭಾರತ ವಲಯ 15ರ ವಲಯಾಧ್ಯಕ್ಷರಾದ JFS ಸಂತೋಷ್ ಶೆಟ್ಟಿ, ವ್ಯವಹಾರ ವಿಭಾಗದ ವಲಯ ನಿರ್ದೇಶಕರಾದ HGF ವಿಕೇಶ್ ಮಾನ್ಯ ಇವರು ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”ವನ್ನು ನೀಡಿ ಗೌರವಿಸಿದರು.
ಈ ಸಂಧರ್ಭದಲ್ಲಿ ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ Jc ಸಂದೀಪ್, Jc ಸೌಮ್ಯ ಚಂದ್ರಹಾಸ, Jc ಜೈಕಿಶನ್, Jc ನವೀನ್, ಮಲ್ಲಿಕಾ ಬಿ. ಎಸ್., Jc ತನೀಶಾ ಬಿ. ಹಾಗೂ ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.








