- Advertisement -
- Advertisement -
ಮುಂಬೈ: ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಹರಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೀಲಾ ಇಂದು ಮುಂಬೈ ಪೊಲೀಸ್ ಠಾಣೆಯಲ್ಲಿ ಹಾಜರಾದರು.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಹಾಜರಾದ ಕಂಗನಾ ಈ ಬಗ್ಗೆ ತಮ್ಮ ಹೇಳಿಕೆ ದಾಖಲಿಸಿದರು. ತಮ್ಮ ವಿರುದ್ದ ದಾಖಲಿಸಲಾದ ಎಫ್ ಐ ಆರ್ ರದ್ದುಪಡಿಸಬೇಕು ಎಂದು ಕಂಗನಾ ಬಾಂಬೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ ಮೊದಲು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡುವಂತೆ ಆದೇಶ ನೀಡಿತ್ತು. ಕಂಗನಾ ಅವರು ಸಾಮಾಜಿಕ ಜಾಲತಾಣದ ಮೂಲಕ ದ್ವೇಷ ಭಾವನೆ ಹರಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
- Advertisement -