Friday, July 4, 2025
spot_imgspot_img
spot_imgspot_img

ಉಜಿರೆ: ಕಿಂಡಿ ಅಣೆಕಟ್ಟೆಗಳಲ್ಲಿ ತ್ಯಾಜ್ಯ ತುಂಬಿ ಕೃತಕ ಪ್ರವಾಹವಾಗುವ ಸಾಧ್ಯತೆ

- Advertisement -
- Advertisement -

ಉಜಿರೆ: ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಪರಿಣಾಮ, ಚಾರ್ಮಾಡಿ, ಮುಂಡಾಜೆ, ಕಲ್ಮಂಜ ಗ್ರಾಮದಲ್ಲಿ ನೇತ್ರಾವತಿ ನದಿ ಹಾಗೂ ಮೃತ್ಯುಂಜಯ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆಗಳಲ್ಲಿ ತ್ಯಾಜ್ಯ ಸಿಲುಕಿಕೊಂಡಿದ್ದು, ಕೃತಕ ನೆರೆ ಉಂಟಾಗುವ ಭಯ ಸ್ಧಳೀಯರಲ್ಲಿ ಎದುರಾಗಿದೆ.

ಶುಕ್ರವಾರ ಮಳೆಯ ಪ್ರಮಾಣ ಇಳಿಮುಖವಾಗಿದೆ. ನೀರಿನ ಹರಿವು ಕಡಿಮೆಯಾದಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮತ್ತೆ ನಿರಂತರ ಮಳೆ ಸುರಿಯಲಾರಂಭಿಸಿದರೆ, ಕೃತಕ ಪ್ರವಾಹ ಎದುರಾಗಬಹುದು ಎಂದು ಸ್ಥಳೀಯರು ವಿನಂತಿಸಿದ್ದಾರೆ.

- Advertisement -

Related news

error: Content is protected !!